
ಇಸ್ಲಾಮಾಬಾದ್ (ಡಿ.29): ಕಾಶ್ಮೀರ ಸೇರಿದಂತೆ, ಭಾರತದೊಂದಿಗೆ ಇರುವ ಎಲ್ಲಾ ವಿವಾದಗಳನ್ನು ಸೌಹಾರ್ದಾಯುತವಾಗಿ ಬಗೆಹರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನವಿಂದು ಹೇಳಿದೆ.
ಕಾಶ್ಮೀರವು ಬಹುಕಾಲದಿಂದ ಬಗೆಹರಿಯದ ವಿವಾದವಾಗಿದೆ, ಅಂತರಾಷ್ಟ್ರೀಯ ಸಮುದಾಯವು ಈ ವಿವಾದವನ್ನು ಪರಿಹರಿಸುವಲ್ಲಿ ಸೂಕ್ತ ಪಾತ್ರವನ್ನು ವಹಿಸಬೇಕೆಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಝಕರಿಯಾ ಹೇಳಿದ್ದಾರೆ.
ಭಾರತದೊಂದಿಗಿರುವ ಎಲ್ಲಾ ವಿವಾದಗಳನ್ನು ನಾವು ಸೌಹಾರ್ದಯುತವಾಗಿ ಬಗೆಹರಿಸಲಿಚ್ಚಿಸುತ್ತೇವೆ, ಎಂದಿರುವ ಝಕರಿಯಾ, ಇಶ್ವಸಂಸ್ಥೆಯ ಭದ್ರತಾ ಮಂಡಳಿಯ ಠರಾವನ್ನು ಭಾರತ ಉಲ್ಲಂಘಿಸುತ್ತಿರುವುದೆ ಖಂಡನೀಯವೆಂದು ಹೇಳಿದ್ದಾರೆ.
ಇಂಡಸ್ ಒಪ್ಪಂದದ ಬಗ್ಗೆ ಮಾತನಾಡಿದ ಅವರು, ಯಾವುದೇ ಒಂದು ದೇಶವು ಏಕಪಕ್ಷೀಯವಾಗಿ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲವೆಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.