
ಬೆಂಗಳೂರು(ನ.23): ವಿವಿಐಪಿಗಳಿಗಾಗಿ ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿ ವಿವಾದಕ್ಕೀಡಾಗಿರುವ ರಾಜ್ಯ ಸರ್ಕಾರ ಈಗ ಶ್ರೀಮಂತರಿಗಾಗಿಯೇ ಲಕ್ಷುರಿ ಬಡಾವಣೆಯನ್ನು ನಿರ್ಮಿಸಲು ಹೊರಟು ಮತ್ತೊಂದು ದೊಡ್ಡ ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ.
ಈ ಶ್ರೀಮಂತರು ಮತ್ತಿನ್ಯಾರು ಅಲ್ಲ ನಮ್ಮ ನಾಡಿನ 225 ಎಂಎಲ್'ಎಗಳು ಹಾಗೂ 75 ಎಂಎಲ್ಸಿಗಳು ಜೊತೆಗೆ ಇವರ ಜೊತೆಗೆ ಕೆಲಸ ಮಾಡುವ ಉನ್ನತ ಸ್ತರದ ಅಧಿಕಾರಿಗಳು. ಈ ಮಹನೀಯರಿಗಾಗಿ ವೈಟ್'ಫೀಲ್ಡ್ ಬಳಿ 100 ಎಕರೆ ಪ್ರದೇಶದಲ್ಲಿ 'ಲೆಜಿಸ್ಲೇಜರ್ ಟೌನ್'ಶಿಪ್' ನಿರ್ಮಿಸುತ್ತಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಈ ಟೌನ್'ಶಿಪ್'ನಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ವಿಸ್ತಾರವಾದ ಬಂಗಲೆಯನ್ನು ನಿರ್ಮಿಸಲಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ ಆಧುನಿಕ ಸೌಲಭ್ಯಗಳಾದ ಕ್ಲಬ್ ಹೌಸ್, ಸಮುದಾಯ ಭವನ,ಮನರಂಜನಾ ಕೇಂದ್ರಗಳು ಹಾಗೂ ಆಟದ ಮೈದಾನ ಸೇರಿದಂತೆ ಹಲವು ಸೌಲಭ್ಯಗಳು ಒಳಗೊಂಡಿರುತ್ತವೆ.
ಈಗ ಸದ್ಯದ ಪ್ರಶ್ನೆಯೇನಂದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ಮತ್ತೆ ಇನ್ನೊಂದು ಲಕ್ಷುರಿ ಯೋಜನೆ ನಿರ್ಮಿಸಬೇಕ್ಕೆನ್ನುವುದು. ತೆರಿಗೆ ಹಣವನ್ನು ಸಾರ್ವಜನಿಕರ ಸದ್ವಿನಿಯೋಗಕ್ಕೆ ಬಳಸದೆ ಶ್ರೀಮಂತರ ಒಡಲಿಗೆ ಹಾಕುವುದು ಎಷ್ಟು ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.