ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ : 2018ರಲ್ಲಿ ಅವರೇ ಸಿಎಂ

Published : Sep 01, 2016, 12:38 PM ISTUpdated : Apr 11, 2018, 12:50 PM IST
ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ : 2018ರಲ್ಲಿ ಅವರೇ ಸಿಎಂ

ಸಾರಾಂಶ

ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ ಹಾಕಿದ್ದೇನೆ, ನಾನು ಪಕ್ಷ ಬಿಟ್ಟು ಹೋಗಲ್ಲ ಹೋದರೆ ತಾಯಿಗೆ ದ್ರೋಹ ಮಾಡಿದಂತಾಗುತ್ತೆ ಎಂದು ಜೆಡಿಎಸ್'ನಿಂದ ಅಮಾನತುಗೊಂಡ ಶಾಸಕ ಜಮೀರ್ ಅಹಮದ್ ಹೇಳಿದ ಮಾತಿದು.

ನನ್ನನ್ನು ಕಾಂಗ್ರೆಸ್'ನಲ್ಲಿ ಗುರುತಿಸಲಿಲ್ಲ, ಜೆಡಿಎಸ್ ಎಲ್ಲವೂ ಕೊಟ್ಟಿದೆ. ಪಕ್ಷ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರದ್ದು. ಅವರು ಹೊರ ಕಳುಹಿಸುವವರೆಗೂ ಬಿಟ್ಟು ಹೋಗಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ತಟಸ್ಥರಾಗಿರಲು ತೀರ್ಮಾನ ಮಾಡಿದ್ದೆವು. ಆದರೆ ಬಿಜೆಪಿಗೆ ಅನುಕೂಲ ಆಗೋದು ಬೇಡ ಅಂತಾ ದೇವೇಗೌಡ'ರಿಗೆ ಮನವಿ ಮಾಡುತ್ತೇನೆ. ನನ್ನ ಸಮಾಜಕ್ಕೆ ಮೋಸ ಮಾಡೋದು ಬೇಡ. ಮುಸ್ಲಿಂ ಸಮಾಜ ಗೌಡರ ಮೇಲೆ ಅಪಾರ ನಂಬಿಕೆ ಇಟ್ಟಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್'ನಿಂದ ನಂಬಿಕೆ ದ್ರೋಹ

ರಾಜ್ಯಸಭಾ ಚುನಾವಣೆಯಲ್ಲಿ ತಪ್ಪಾಗಿದೆ ನಿಜ. ಕುಮಾರಸ್ವಾಮಿ ಅನುಮತಿ ಪಡೆದೇ ಕಾಂಗ್ರೆಸ್'ಗೆ ಮತ ಹಾಕಿದ್ದೇನೆ. ದೇವೇಗೌಡ, ಕುಮಾರಸ್ವಾಮಿ ನಮ್ಮ ನಾಯಕರು. ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಅಂಥ ಹೆಸರಿಡಬೇಕಿತ್ತು. ಆದರೆ ಹಜ್ ಭವನ ಅಂಥ ಕಾಂಗ್ರೆಸ್ ಸರ್ಕಾರ ನಾಮಕರಣ ಮಾಡಿದೆ. ಇದು ನಂಬಿಕೆ ದ್ರೋಹದ ಕೆಲಸ. ನಮ್ಮ ಸಮಾಜದ ಮುಖಂಡರು ನನ್ನ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಸಿಎಂ ಆಗಿ 3 ತಿಂಗಳಲ್ಲೇ ಹಜ್ ಭವನ್'ಗೆ ಟಿಪ್ಪು ಸುಲ್ತಾನ್ ಭವನ ಅಂತ ನಾವು ಮರುನಾಮಕರಣ ಮಾಡುತ್ತೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ