ಅಧ್ಯಕ್ಷ ಸ್ಥಾನಕ್ಕೆ ಬಂತು ಕುತ್ತು : ಮತ್ತೆ ಚುನಾವಣೆ ?

Published : Jul 30, 2018, 04:00 PM IST
ಅಧ್ಯಕ್ಷ ಸ್ಥಾನಕ್ಕೆ ಬಂತು ಕುತ್ತು :  ಮತ್ತೆ ಚುನಾವಣೆ ?

ಸಾರಾಂಶ

ಅಧ್ಯಕ್ಷ ಸ್ಥಾನದಿಂದ ಈ ವ್ಯಕ್ತಿಯನ್ನು ಕೆಳಕ್ಕಿಳಿಸುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಈ ನಿಟ್ಟಿನಲ್ಲಿ  ಇದೀಗ ಮತ್ತೆ ಚುನಾವಣೆಯೊಂದು ಜರುಗುವ ಸಾಧ್ಯತೆ ಇದೆ. ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟೆಗೌಡ ಸ್ಥಾನಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ. 

ಬೆಂಗಳೂರು : ಒಕ್ಕಲಿಗ ಸಂಘದ ಮಹಾಬಿಕ್ಕಟ್ಟು ಇದೀಗ ತಾರಕಕ್ಕೇರಿದೆ.  ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟೆಗೌಡ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಒಕ್ಕಲಿಗ ಸಂಘದ ನಿರ್ದೇಶಕರು ಮುಂದಾಗಿದ್ದಾರೆ. 

ಚಾಮರಾಜಪೇಟೆಯ ಒಕ್ಕಲಿಗ ಸಂಘದಲ್ಲಿ ಸಭೆ ಸೇರಿ ನಿರ್ದೇಶಕರು, ಪದಾಧಿಕಾರಿಗಳು ಈ ಬಗ್ಗೆ ತೀರ್ಮಾನ ಮಾಡಿದ್ದಾರೆ. ಅಧ್ಯಕ್ಷ ಬೆಟ್ಟೆಗೌಡ ಮತ್ತು ಅವರ ತಂಡದ ವಿರುದ್ಧ ಅವಿಶ್ವಾಸ ಮಂಡಿಸಲು ನಿರ್ಧಾರ ಮಾಡಲಾಗಿದೆ. 

ಈ ಹಿಂದೆ ಅವಿಶ್ವಾಸ ನಿರ್ಣಕ್ಕೆ ಸಭೆ ನಿಗದಿ ಮಾಡಿ ಎಂದು ಪತ್ರ ಬರೆದಿದ್ದರೂ ಕೂಡ ಯಾವುದೇ ಸಭೆಯನ್ನು ನಿಗದಿ ಮಾಡಿರಲಿಲ್ಲ. ಇದೀಗ ಅವಿಶ್ವಾಸ ನಿರ್ಣಯ ಮಂಡಿಸಲು ಒಕ್ಕಲಿಗರ ಸಂಘದ ನಿರ್ದೇಶಕರು ಸಹ ಮಾಡಿ ಬಳಿಕ ಸಭೆ ನಡೆಸಿದ್ದಾರೆ.

ಇದರಿಂದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿರುವ ಬೆಟ್ಟೇಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಿ ಮತ್ತೆ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಣ್ಣಲ್ಲಿ ಮರೆಯಾಗಿದ್ದ ಜೈನರ ಕಾಲದ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!