
ನವದೆಹಲಿ (ಆ.23): ಇನ್ಫೊಸಿಸ್ ಸಿಇಓ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಸಂಸ್ಥೆಯ ಸಹ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲೇಕಣಿಯವರನ್ನು ವಾಪಸ್ ಕರೆತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉನ್ನತ ಮಟ್ಟದ ಬಂಡವಾಳ ಹೂಡಿಕೆದಾರರು ಇನ್ಫೊಸಿಸ್ ಮಂಡಳಿಗೆ ಪತ್ರ ಬರೆದಿದ್ದು, ನಂದನ್ ನಿಲೇಕಣೀಯವರನ್ನು ಮತ್ತೊಮ್ಮೆ ಕರೆ ತನ್ನಿ. ಇದರಿಂದಾಗಿ ನಮ್ಮ ಗ್ರಾಹಕರು, ಹೂಡಿಕೆದಾರರು ಹಾಗೂ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಬರುತ್ತದೆ ಎಂದು ತಮ್ಮ ಮೇಲ್’ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ನಂದನ್ ನಿಲೇಕಣಿಯವರು ಇನ್ಫೊಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರು. ನಾರಾಯಣ ಮೂರ್ತಿಯವರ ನಂತರ ಇವರು ಕಂಪನಿಯ ಎರಡನೇ ಸಿಇಓ ಆಗಿದ್ದು, 2002 ರಿಂದ 2007 ರವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾರಾಯಣ ಮೂರ್ತಿ-ನಿಲೇಕಣಿ ಕಾರ್ಯಾವಧಿಯಲ್ಲಿ ಕಂಪನಿಯು ಲಾಭವನ್ನು ಕಂಡಿತ್ತು. 2009 ರಲ್ಲಿ ಇನ್ಫೋಸಿಸ್’ನ್ನು ತೊರೆದು ಯುಐಡಿಎಐ ಚೇರ್.ಮನ್ ಆದರು.
ವಿಶಾಲ್ ಸಿಕ್ಕಾ-ನಾರಾಯಣ ಮೂರ್ತಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಿಕ್ಕಾ ರಾಜಿನಾಮೆ ನೀಡಿ ಹೊರ ಬಂದರು. ಇದರಿಂದಾಗಿ ಬಿಕ್ಕಟ್ಟು ಉಂಟಾಗಿದ್ದು, ನಂದನ್ ನಿಲೇಕಣಿಯವರನ್ನು ವಾಪಸ್ ಕರೆ ತಂದರೆ ಸರಿಯಾಗಬಹುದು ಅನ್ನೋದು ಬಂಡವಾಳ ಹೂಡಿಕೆದಾರರ ಲೆಕ್ಕಾಚಾರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.