
ಬೆಂಗಳೂರು: ಉತ್ತರ ವಿಯೆಟ್ನಾಂನ ಸ್ಯಾಮ್'ಲ್ಯಾಂಗ್ ಎಂಬಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗಿ ಸ್ಯಾಮ್ ಲಾಂಗ್ ಗ್ರಾಮದಲ್ಲಿ ಇಡೀ ಸೇತುವೆ ಮುಳುಗಿ ಹೋಗಿತ್ತು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಜಲಾವೃತವಾಗಿತ್ತು. ಮಕ್ಕಳು ನಿತ್ಯ ಈ ಸೇತುವೆ ದಾಟಿಕೊಂಡು ಶಾಲೆಗೆ ಹೋಗಬೇಕಾಗಿತ್ತು. ಆದ್ರೆ, ಮಗಳಿಗೆ ಶಾಲೆ ತಪ್ಪಬಾರದು, ಆಕೆ ಹಾಕಿಕೊಂಡಿರೋ ಯುನಿಫಾರ್ಮ್ ಕೂಡ ಹಾಳಾಗಬಾರದು ಎಂದು ಮಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೂರಿಸಿ.. ಆ ಚೀಲಕ್ಕೆ ದಾರದಿಂದ ಕಟ್ಟಿ ಇಡೀ ನದಿಯಲ್ಲಿ ಈಜುತ್ತಾ ಸಾಗುತ್ತಾನೆ.. ಇಡೀ ನದಿ ದಾಟಿದ್ದರೂ ಆ ಬಾಲಕಿಗೆ ಒಂದೇ ಒಂದು ಹನಿ ನೀರು ಹತ್ತಿರಲಿಲ್ಲ.. ಯುನಿಫಾರ್ಮ್ ಕೂಡ ಒದ್ದೆಯಾಗಿರಲಿಲ್ಲ.. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- ಜೆ.ಎಸ್. ಪೂಜಾರ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.