
ಶ್ರೀನಗರ [ಜೂನ್ 16] : ಉಗ್ರರಿಂದ ಗುಂಡಿನ ಮಳೆ ತಿಂದು ಹತ್ಯೆಯಾಗಿದ್ದ ವೀರ ಯೋಧ ಔರಂಗಜೇಬ್ ಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಯೋಧನ ಅಪಹರಣ ಮಾಡಿದ ನಂತರ ಆತನನ್ನು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಶುಕ್ರವಾರದಿಂದಲೇ ವಿಡಿಯೋ ಜಾಲತಾಣದಲ್ಲಿದ್ದು ಇಂದು ವೈರಲ್ ಆಗಿದೆ.
ಈದ್ ಹಬ್ಬದ ಆಚರಣೆಗಾಗಿ ರಜೆ ಪಡೆದು ಮನೆಗೆ ತೆರಳುತ್ತಿದ್ದ ಯೋಧನನ್ನು ಅಪಹರಿಸಿದ ಉಗ್ರರು ನಂತರ ಹತ್ಯೆ ಮಾಡಿದ್ದರು. ಪುಲ್ವಾನಾ ಜಿಲ್ಲೆಯ ಗುಸ್ಸೂ ಬಳಿ ಶವ ಪತ್ತೆಯಾಗಿತ್ತು.
ಭಾರತೀಯ ಯೋಧರು ಪಾಕ್ ಸಿಹಿ ನಿರಾಕರಿಸಿದ್ದು ಯಾಕೆ?
ಅಂತಿಮ ವಿಡಿಯೋದಲ್ಲಿ ಏನಿದೆ?: ಮಣ್ಣು ಮಣ್ಣಾದ ಬಟ್ಟೆಯಲ್ಲಿ ಯೋಧ ಔರಂಗಜೇಬ್ ಒಂದು ಕಡೆ ಕುಳಿತುಕೊಂಡಿದ್ದಾರೆ. ಉಗ್ರನೊಬ್ಬ ಅವರಿಗೆ ಪ್ರಶ್ನೆ ಮಾಡುತ್ತಿದ್ದು ಒಂದಾದ ಮೇಲೆ ಒಂದು ಉತ್ತರ ಪಡೆದುಕೊಳ್ಳುತ್ತಿದ್ದಾನೆ. ಜಮ್ಮು ಮತ್ತು ಕಾಶ್ಮೀರದಿಂದ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರಕಾರ ತೀರ್ಮಾನಿಸಬೇಕು ಎಂದು ಒತ್ತಾಯ ಮಾಡುತ್ತಾನೆ. ಫೇಸ್ ಬುಕ್ ನಲ್ಲಿ 47 ಸಾವಿರಕ್ಕೂ ಅಧಿಕ ಜನರಿಂದ ವೀಕ್ಷಣೆಗೆ ಒಳಗಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.