
ಕಾನಪುರ್(ಅ. 14): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕಲ್ಪನೆ ಈಗಾಗಲೇ ಮನೆಮಾತಾಗಿದೆ. ಆದರೂ ಇದು ಬಹುತೇಕ ಕಡೆ ಸಾಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೃಹಿಣಿಯೊಬ್ಬರು ತಮ್ಮ ಮಾಂಗಲ್ಯಸೂತ್ರವನ್ನೇ ಮಾರಾಟ ಮಾಡಿ ಶೌಚಾಲಯ ಕಟ್ಟಿಸುವ ಮೂಲಕ ಮಾದರಿಯಾಗಿದ್ದಾರೆ. ಕಾನ್ಪುರ ನಿವಾಸಿ ಲತಾದೇವಿ ದಿವಾಕರ್ ತಮ್ಮ ತಾಳಿ ಮಾರಿ ಶೌಚಾಲಯ ಕಟ್ಟಿಸಿದ್ದಾರೆ. ತಮ್ಮ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಕುಟುಂಬಸ್ಥರು ಬಹಿರ್ದೆಸೆಗೆ ಹೋಗಲು ಮುಜುಗರ ಪಡುತ್ತಿದ್ದರು. ಶೌಚಕ್ಕಾಗಿ ಹೊರಹೋಗುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು. ಇದರಿಂದ ಬೇಸತ್ತ ಲತಾದೇವಿ ಮಾಂಗಲ್ಯಸೂತ್ರಕ್ಕಿಂತ ಮನೆಯಲ್ಲಿ ಶೌಚಾಲಯವೇ ಮುಖ್ಯ ಎಂದು ನಿರ್ಧರಿಸಿ ತಾಳಿ ಮಾರಿದ್ದಾರೆ. ಮನೆಯಲ್ಲಿ ಶೌಚಾಲಯ ನಿರ್ಮಿಸಿಲು ಪ್ರಧಾನಿ ಮೋದಿಯವರ 'ಸ್ವಚ್ಛ್ ಭಾರತ್' ಅಭಿಯಾನ ಪ್ರಭಾವ ಎನ್ನುವ ಲತಾದೇವಿ, ಆಭರಣಕ್ಕಿಂತ ಮೂಲಭೂತ ಅವಶ್ಯಕತೆಯಾದ ಶೌಚಾಲಯ ಮುಖ್ಯ. ಹೀಗಾಗಿ ಮಾಂಗಲ್ಯಸೂತ್ರ ಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಕೆಲ ತಿಂಗಳಿನಿಂದಲೂ ಈಕೆಯ ಕಾರ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.