
ಜನಜಂಗುಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುವ ವ್ಯಕ್ತಿಯೊಬ್ಬರ ಫೋಟೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈತ ಸಿಪಿಎಂ ಕಾರ್ಯಕರ್ತನಾಗಿದ್ದು, ಅಕ್ರಮವಾಗಿ ಪೊಲೀಸ್ ಸಮವಸ್ತ್ರ ಧರಿಸಿ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಇದು ಕೇರಳದಲ್ಲಿರುವ ಎಡಪಂಥೀಯ ಸರ್ಕಾರದ ಕುತಂತ್ರ ಎಂದು ಈ ಫೋಟೋಕ್ಕೆ ವಿವರಣೆ ಬರೆಯಲಾಗಿದೆ.
ಮೊದಲಿಗೆ ಬಲಪಂಥೀಯ ಸಂಘಟನೆಯೊಂದರಿಂದ ಈ ಫೋಟೋ ಮತ್ತು ವಿವರಣೆ ಟ್ವೀಟ್ ಆಗಿದೆ. ಅದು ಸಾವಿರಾರು ಬಾರಿ ರೀಟ್ವೀಟ್ ಆಗಿದೆ. ನಂತರ ಇದೇ ಫೋಟೋವನ್ನು ರಿಆರ್ಮಿಂಗ್ ಹಿಂದೂಯಿಸಂ ಎಂಬ ಗ್ರೂಪ್ನವರು ಫೇಸ್ಬುಕ್ನಲ್ಲಿ ಹಾಕಿ, ‘ಇವನು ವಲ್ಲಭ ದಾಸ್. ತ್ರಿವೇಂದ್ರಂನ ಸಿಪಿಎಂ ಕಾರ್ಯಕರ್ತ. ಇವನು ಕೇರಳ ಪೊಲೀಸ್ ಇಲಾಖೆಯವನಲ್ಲ. ಆದರೆ, ಈ ಗೂಂಡಾ ಪೊಲೀಸ್ ಸಮವಸ್ತ್ರ ಧರಿಸಿ ಅಯ್ಯಪ್ಪ ಭಕ್ತರ ಮೇಲೆ 5 ದಿನಗಳಿಂದ ದಾಳಿ ನಡೆಸುತ್ತಿದ್ದಾನೆ... ಲಾತ್ ಸಲಾಂ!!!’ ಎಂದು ಬರೆದಿದ್ದಾರೆ.
ಆದರೆ, ಈ ಕುರಿತು ಶೋಧಿಸಿದಾಗ ಈ ವ್ಯಕ್ತಿಯ ಹೆಸರು ಆಶಿಕ್ ಜಫರ್ ಎಂದಾಗಿದ್ದು, ಈತ ನಿಜವಾಗಿಯೂ ಕೇರಳ ಸಶಸ್ತ್ರ ಪಡೆಯ ಪೊಲೀಸನೇ ಆಗಿದ್ದಾನೆ ಎಂದು ತಿಳಿದುಬಂದಿದೆ. ಕೇರಳ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಪ್ರಕಟಣೆ ಹೊರಡಿಸಿ, ಕುಟ್ಟಿಕಾನಂನಲ್ಲಿರುವ 5ನೇ ಕೆಎಪಿ ಬೆಟಾಲಿಯಂನಲ್ಲಿ ಜಫರ್ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಜತೆ ಬರೆದಿರುವುದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ