ಮಂಗಳೂರಿನ ದೇವಸ್ಥಾನದಲ್ಲಿ ಅಚ್ಚರಿ ಘಟನೆ, ಗ್ರಾಮಸ್ಥರು ಕಂಗಾಲು

Published : Mar 16, 2017, 02:32 PM ISTUpdated : Apr 11, 2018, 12:44 PM IST
ಮಂಗಳೂರಿನ ದೇವಸ್ಥಾನದಲ್ಲಿ ಅಚ್ಚರಿ ಘಟನೆ, ಗ್ರಾಮಸ್ಥರು ಕಂಗಾಲು

ಸಾರಾಂಶ

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ.

ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಲ್ಕುಂದದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಅಚ್ಚರಿಯೊಂದು ನಡೆದಿದೆ.

ಮಾ. 11ರಂದು ಬೆಳಿಗ್ಗೆ 4 ಗಂಟೆಯಿಂದ 5 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ  ಜಾಗಟೆ , ಕೊಂಬು ಕಹಳೆಯ ಶಬ್ದ ಕೇಳಿಸಿದೆ ಎಂದು ಹೇಳಲಾಗಿದೆ.

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ. ನಂತರ ಊರಿನವರು ದೇವಸ್ಥಾನ ಕ್ಕೆ ಬಂದು ನೋಡಿದಾಗ ದೇವಸ್ಥಾನದ  ಸುತ್ತಲೂ ಭಸ್ಮ ಇರುವುದು ಗಮನಕ್ಕೆ ಬಂದಿದೆ.

ದೇವಸ್ಥಾನದ ಬಾಲವನದಿಂದ ನಾಗನಕಟ್ಟೆಯವರೆಗೆ ಈ ಭಸ್ಮ ದ ಸಾಲಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಒಂದೆಡೆ ಇದು ಅಚ್ಚರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಯಾರಾದರೂ ಈ ರೀತಿ ಮಾಡಿರಬಹುದೆ ಎಂಬ ಸಂಶಯವನ್ನು ಸೃಷ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ