
ಬೆಂಗಳೂರು (ಮಾ.16): ವಿಧಾನಪರಿಷತ್ತಿನಲ್ಲಿ ಇಂದು ಬೆಂಗಳೂರಿನ ಡ್ರಗ್ಸ್ ಮಾಫಿಯಾ ವಿಚಾರ ಪ್ರತಿಧ್ವನಿಸಿತು.
ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸೋಮಣ್ಣ, ನೈಜಿರಿಯನ್ ದಂಪತಿಯ ಮಕ್ಕಳು ಶಾಲಾ ಮಕ್ಕಳಿಗೆ ಚಾಕಲೇಟ್ ನೀಡುತ್ತಿದ್ದಾರೆ. ಚಾಕಲೇಟ್ ತಿಂದ ಮಕ್ಕಳು ಸ್ಥಿಮಿತ ಕಳೆದುಕೊಳ್ಳುತ್ತಾರೆ. ಹೀಗಾಗಿ ಆ ದಂಪತಿಯನ್ನು ಗಡಿಪಾರು ಮಾಡಬೇಕೆಂದು ವಿ. ಸೋಮಣ್ಣ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಮಾದಕ ವಸ್ತು ಜಾಲ ಬೆಳೆಯುವುದಕ್ಕೆ ನಾವು ಬಿಡುವುದಿಲ್ಲ ಎಂದರು.
ಒಟ್ಟು 48 ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಪ್ರಕರಣಗಳ ಪತ್ತೆಹಚ್ಚಿದ್ದು, 2015 ರಿಂದ 2017 ರವರೆಗೆ ಒಟ್ಟು 23 ಪ್ರಕರಣದಲ್ಲಿ 31 ಮಂದಿ ನೈಜಿರಿಯನ್ ಪ್ರಜೆಗಳ ಬಂಧಿಸಿರೋದಾಗಿ ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.