
ವಿಜಯಪುರ (ನ.17): ಸಂಕಷ್ಟ ಏನೇ ಇದ್ದರೂ, ಒಗ್ಗಟ್ಟಿದ್ದರೆ, ಎಲ್ಲವೂ ಸಾಧ್ಯವೆಂಬುವುದು ವಿಜಯಪುರದಲ್ಲಿ ಸಾಬೀತಾಗಿದೆ.
ವಿಜಯಪುರದಲ್ಲಿ ರಾಜಕುಮಾರ್ ಗೋಳಸಂಗಿ ಎಂಬುವರ ಇಬ್ಬರು ಮಕ್ಕಳ ಮದುವೆ ಫಿಕ್ಸ್ ಆಗಿತ್ತು. ಆದರೆ, ನೋಟಿನ ನಿಷೇಧದಿಂದಾಗಿ ಸಮಸ್ಯೆ ಶುರುವಾಯ್ತು. ಆ ವೇಳೆ ಗೆಳೆಯರು, ಬಂಧುಗಳು ಎಲ್ಲ ಕೈಜೋಡಿಸಿ ತಮ್ಮಲ್ಲಿದ್ದ 100, 50 ರೂಪಾಯಿಗಳನ್ನೆಲ್ಲ ಒಟ್ಟುಗೂಡಿಸಿ ಮದುವೆ ನಡೆಸಿಕೊಟ್ಟಿದ್ದಾರೆ.
ಚಿನ್ನದಂಗಡಿ, ಕಿರಾಣಿ ಅಂಗಡಿಗಳಲ್ಲೆಲ್ಲ ಕೇವಲ ನಂಬಿಕೆಯ ಮೇಲೆ ಸಾಲ ಪಡೆದು ಮದುವೆಯನ್ನು ಸುಸೂತ್ರವಾಗಿ ಮುಗಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.