
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಅಥವಾ ಪಕ್ಷದ ಮೈತ್ರಿಯೊಂದಿಗೆ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನೆರವೇರಿತು.
ರೂಪಾನಿ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದು, ಇದು ಎರಡನೇ ಬಾರಿ. ಇವರೊಂದಿಗೆ ದಿಲೀಪ್ ಕುಮಾರ್ ವಿರಾಜಿ ಠಾಕೂರ್, ಇಶ್ವರ್ಬಾಯಿ ರಮಣ್ಬಾಯಿ ಪರ್ಮಾರ್, ಪ್ರದೀಪ್ ಸಿನ್ಙ ಜಡೇಜಾ, ಸೌರಭ್ ಪಟೇಲ್, ಜಯೇಶ್ ಬಾಯಿ ವಿಟ್ಟಲ್ಬಾಯಿ ರಾದಾದೀಯ ಸೇರಿ ಹಲವರು ಸಂಪುಟ ಸಚಿವರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಗುಜರಾತ್ನಲ್ಲಿ ಬಿಜೆಪಿ 6ನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 99 ಸ್ಥಾನಗಳನ್ನು ಪಡೆದು, ಸರಳ ಬಹುಮತದೊಂದಿಗೆ ಅಧಿಕಾರಿದ ಗದ್ದುಗೆ ಏರಿದೆ. ಕಳೆದ ಸಲಕ್ಕಿಂತ 16 ಸ್ಥಾನ ಕಡಿಮೆ ಬಂದಿದ್ದರೂ, ಅಧಿಕಾರಕ್ಕೆ ಬಂದ ತೃಪ್ತಿ ಬಿಜೆಪಿಗಾದರೆ, ಆಡಳಿತರೂಢ ಪಕ್ಷ ಮೂರಂಕಿ ಸ್ಥಾನಗಳನ್ನು ಸಿಗದಂತೆ ಎಚ್ಚರವಹಿಸಿದ ಕಾಂಗ್ರೆಸ್ಗೆ ಸೋತರೂ, ಗೆದ್ದ ಸಂಭ್ರಮ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.