ಈದುಷ್ಟಸಂಪೂರ್ಣದೃಶ್ಯವನ್ನುವಿಡಿಯೋಮಾಡಿರುವುದರಜೊತೆಸಾಮಾಜಿಕಜಾಲತಾಣಗಳಲ್ಲಿಹರಿಯಬಿಟ್ಟಿರುವುದರ ಜೊತೆಗೆಲವ್ ಜಿಹಾದ್ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆಕೂಡನೀಡಿದ್ದಾನೆ.
ಜೈಪುರ(ಡಿ.07): ರಾಜಸ್ಥಾನದಲ್ಲಿ ದೇಶವನ್ನೇ ಬೆಚ್ಚಿ ಬೀಳಿಸುವ ಅಮಾನವೀಯ ಕೃತ್ಯ ನಡೆದಿದೆ. ಲವ್ ಜಿಹಾದ್ ಹೆಸರಿನಲ್ಲಿ ದುಷ್ಕರ್ಮಿಯೊಬ್ಬ ಮಧ್ಯವಯಸ್ಕ ಯುವಕನೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಆ ವ್ಯಕ್ತಿಯನ್ನು ಅಲ್ಲೇ ಸುಟ್ಟು ಅಟ್ಟಹಾಸ ಮೆರದಿದ್ದಾನೆ.
ಈ ದುಷ್ಟ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿರುವುದರ ಜೊತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದರ ಜೊತೆಗೆ ಲವ್ ಜಿಹಾದ್ ಮಾಡಿದವರಿಗೆಲ್ಲಾ ಇದೇ ಶಿಕ್ಷೆ ಎಂದು ಎಚ್ಚರಿಕೆ ಕೂಡ ನೀಡಿದ್ದಾನೆ. ರಾಜಸ್ಥಾನ ರಾಜ್ಸಮಂದ್ನಲ್ಲಿ ಘಟನೆ ನಡೆದಿದೆ. ಮಹಮ್ಮದ್ ಭಟ್ಟ್ ಶೇಕ್ ಎಂಬಾತನೇ ಕೊಲೆಯಾದ ದುರ್ದೈವಿ. ಹಂತಕ ಶಂಬುನಾಥ್ ರಾಯ್ಗರ್ಪೊಲೀಸರ ವಶಕ್ಕೆ ಪಡೆದಿದ್ದು, ರಾಜ್ಯ ಸರ್ಕಾರ ಪ್ರಕರಣವನ್ನು ಎಸ್'ಐಟಿಗೆ ವಹಿಸಿದೆ.