
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಯೋಜನೆಗೆ ಮತ್ತೆ ಚಾಲನೆ ನೀಡಿರುವ ವಿಶ್ವ ಹಿಂದೂ ಪರಿಷತ್, ಇದೀಗ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳನ್ನು ಸ್ಥಳಕ್ಕೆ ತರಿಸಿಕೊಳ್ಳುವ ಕೆಲಸ ಆರಂಭಿಸಿದೆ.
ಇದರ ಮೊದಲ ಹಂತವಾಗಿ ರಾಜಸ್ಥಾನದಿಂದ 2 ಲಾರಿಗಳಷ್ಟುಕಲ್ಲು ಸೋಮವಾರ ಅಯೋಧ್ಯೆಗೆ ಬಂದಿದೆ. ಮಂದಿರ ನಿರ್ಮಾಣಕ್ಕೆ ಒಟ್ಟಾರೆ 100 ಲಾರಿ ಕಲ್ಲು ಬೇಕೆಂದು ಅಂದಾಜಿಸಲಾಗಿದೆ.
ಹಂತಹಂತವಾಗಿ ಇಷ್ಟುಕಲ್ಲುಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಶೇಖರಿಸಿ ಇನ್ನೊಂದು ವರ್ಷದಲ್ಲಿ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಿಎಚ್ಪಿ ಹಿರಿಯ ನಾಯಕ ತ್ರಿಲೋಕಿ ನಾಥ್ ತಿಳಿಸಿದ್ದಾರೆ.
2015ರಲ್ಲೂ ಕೂಡಾ ವಿಎಚ್ಪಿ ರಾಜಸ್ಥಾನದಿಂದ ಹೀಗೆ ಕಲ್ಲು ತರಿಸುವ ಕೆಲಸ ಆರಂಭಿಸಿತ್ತು. ಆದರೆ 2 ಲಾರಿ ಕಲ್ಲು ಬರುತ್ತಲೇ ಎಚ್ಚೆತ್ತುಕೊಂಡಿದ್ದ ಅಂದಿನ ಅಖಿಲೇಶ್ ಸರ್ಕಾರ, ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಅದಕ್ಕೆ ತಡೆ ಒಡ್ಡಿತ್ತು.
ಆದರೆ ಇದೀಗ ಯೋಗಿ ಸರ್ಕಾರ ಬರುತ್ತಲೇ, ವಾಣಿಜ್ಯ ತೆರಿಗೆ ಇಲಾಖೆ ಕಲ್ಲು ತರಿಸಲು ಅಗತ್ಯ ಪರವಾನಗಿ ನೀಡುವ ಮೂಲಕ ವಿಎಚ್ಪಿ ಕೆಲಸವನ್ನು ಸರಾಗಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.