ಎಸಿಬಿ ಬಲೆಗೆ ಸಿಕ್ಕ ಭ್ರಷ್ಟ ವೈದ್ಯ ಲಂಚದ ಹಣವನ್ನೇ ನುಂಗಿ ಪೇರಿ ಕಿತ್ತ

Published : Mar 17, 2018, 05:40 PM ISTUpdated : Apr 11, 2018, 12:40 PM IST
ಎಸಿಬಿ ಬಲೆಗೆ ಸಿಕ್ಕ ಭ್ರಷ್ಟ ವೈದ್ಯ ಲಂಚದ ಹಣವನ್ನೇ ನುಂಗಿ ಪೇರಿ ಕಿತ್ತ

ಸಾರಾಂಶ

ಲಂಚಕೋರನನ್ನು ಬಂಧನಕ್ಕೆ ಬೀಳಿಸಬೇಕೆಂದು ವ್ಯಕ್ತಿಯೊಬ್ಬನ ಕೈಯಲ್ಲಿ 2 ಸಾವಿರ ರೂ. ಕೊಟ್ಟು ಅದಕ್ಕೆ ರಸಾಯನಿಕ ಸಿಂಪಡಿಸಿ ಕಳಿಸಿದ್ದಾರೆ

ಅಹಮದಾಬಾದ್(ಮಾ.17): ಭ್ರಷ್ಟರು ಗೌಪ್ಯ ಜಾಗಗಳಲ್ಲಿ ಹಣವನ್ನು ಬಚ್ಚಿಟ್ಟು ಸಿಕ್ಕಿ ಬೀಳುವುದು ಸಾಮಾನ್ಯ ವಿಷಯ. ಆದರೆ ಇಲ್ಲೊಬ್ಬ ಭ್ರಷ್ಟ ವೈದ್ಯ ತಾನು ಸಿಕ್ಕಿ ಬೀಳಬಾರದೆಂದು ಲಂಚ ಪಡೆದ ಹಣವನ್ನೆ ನುಂಗಿ ಪೇರಿ ಕಿತ್ತ ಘಟನೆ  ಅಹಮದಾಬಾದ್'ನ ಪಠಾನ್ ನಗರದಲ್ಲಿ ನಡೆದಿದೆ.

ಈತ ಎರಡನೆ ದರ್ಜೆ ಪಶು ವೈದ್ಯ  ಹಣಕ್ಕಾಗಿ ಹಲವರನ್ನು ಪೀಡಿಸುತ್ತಿದ್ದ.  ಪುಣ್ಮಾತ್ಮನ ಲಂಚದ ಮಹಿಮೆ ಭ್ರಷ್ಟಚಾರ ನಿಗ್ರಹ ದಳ ಅಧಿಕಾರಿಗಳಿಗೆ ಗೊತ್ತಾಗಿದೆ. ಲಂಚಕೋರನನ್ನು ಬಂಧನಕ್ಕೆ ಬೀಳಿಸಬೇಕೆಂದು ವ್ಯಕ್ತಿಯೊಬ್ಬನ ಕೈಯಲ್ಲಿ 2 ಸಾವಿರ ರೂ. ಕೊಟ್ಟು ಅದಕ್ಕೆ ರಸಾಯನಿಕ ಸಿಂಪಡಿಸಿ ಕಳಿಸಿದ್ದಾರೆ. ಪುಣ್ಯಾತ್ಮನಿಗೆ ಅಧಿಕಾರಿಗಳು ತನ್ನನ್ನು ಸಿಕ್ಕಿಬೀಳಿಸಿವುದು ಗೊತ್ತಾಗಿದೆ.

ಅಧಿಕಾರಿಗಳು ಬರುವುದನ್ನು ಗಮನಿಸಿ ಲಂಚ ಪಡೆದ ನೋಟನ್ನೇ ನುಂಗಿ ಪೇರಿ ಕಿತ್ತ. ಛಲ ಬಿಡದ ಅಧಿಕಾರಿಗಳು ಈತನ ಹಿಂದೆಯೇ ಓಡಿ ಹಿಡಿದಿದ್ದಾರೆ. ತನಿಖೆ ಮುಂದುವರಿಸಲು ಪಡೆದ ನೋಟು ಮುಖ್ಯವಾಗಿ ಬೇಕಾಗುತ್ತದೆ. ನೋಟನ್ನು ವೈದ್ಯರ ಸಹಾಯದಿಂದ ಹೊಟ್ಟೆಯೊಳಗಿಂದ ತೆಗೆಸಿ ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?