
ಹೈದರಾಬಾದ್(ನ.30): ತೆಲಂಗಾಣದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹಾಗೂ ಬಿಜೆಪಿ ನಾಯಕ ರಾಜಾ ಸಿಂಗ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಒವೈಸಿ ತಲೆ ಕಡಿದ ನಂತರವೇ ನನಗೆ ತೃಪ್ತಿ ಸಿಗುತ್ತದೆ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಇತ್ತಿಚೀಗೆ ಹೇಳಿದ್ದರು. ರಾಜಾ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಒವೈಸಿ, 'ಯಾಕೆ ಸಹೋದರ? ಮನೆಯಲ್ಲಿ ನಿನಗೆ ತೃಪ್ತಿ ಸಿಗುತ್ತಿಲ್ಲವೇ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
'ಬಿಜೆಪಿ ನಾಯಕರು ನನ್ನ ತಲೆ ಕಡಿದು, ಕಾಲಿನ ಕೆಳಗೆ ಇಟ್ಟುಕೊಂಡರೆ ತೃಪ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ಮನೆಯಲ್ಲಿ ನಿಮಗೆ ತೃಪ್ತಿ ಸಿಗುತ್ತಿಲ್ಲ ಎಂದರೆ, ವೈದ್ಯರ ಬಳಿ ಹೋಗಿ. ಇಲ್ಲವೇ ತಜ್ಞರ ಬಳಿ ಹೋಗಿ. ತೃಪ್ತಿ ಪಡೆಯಲು ಸಾಕಷ್ಟು ದಾರಿಗಳಿವೆ' ಎಂದು ಒವೈಸಿ ಮಾತಿನ ಮೂಲಕವೇ ಚುಚ್ಚಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರತ್ತ ತಮ್ಮ ಮಾತಿನ ಬಾಣ ಬಿಟ್ಟಿರುವ ಒವೈಸಿ, ಚುನಾವಣಾ ಪ್ರಚಾರಕ್ಕೆ ನೀವು ಹೈದರಾಬಾದ್ಗೆ ಬಂದಾಗ ಸಿಂಗ್ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ನಿಮಗೂ ತೃಪ್ತಿ ಸಿಗುತ್ತಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.