
ಬೆಂಗಳೂರು : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ತರಕಾರಿ ದರದ ಮೇಲೆ ಪರಿಣಾಮ ಬೀರಿದೆ. ಮಳೆ ಕೊರತೆ, ಇಳುವರಿ ಕುಸಿತ ಕಂಡಿದ್ದ ರೈತರು ಮುಂಗಾರು ಮಳೆಯಿಂದ ಸಂತಸಗೊಂಡಿದ್ದರೆ, ಇನ್ನೊಂದೆಡೆ ತಾವು ಬೆಳೆದ ಬೆಳೆಗೆ ಮಳೆ ಕಂಟಕವಾಗುವ ಆತಂಕವನ್ನೂ ಎದುರಿಸುತ್ತಿದ್ದಾರೆ.
ಕೆಲ ದಿನಗಳಿಂದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದ ಬಹುತೇಕ ತರಕಾರಿಗಳು ಅಗ್ಗವಾಗಿ ಮಾರಾಟ ವಾಗುತ್ತಿವೆ. .ಆರ್.ಮಾರು ಕಟ್ಟೆಯಲ್ಲಿ ಬದನೆ ಕಾಯಿ, ಬೆಂಡೆಕಾಯಿ, ಸೀಮೆಬದನೆ, ನವಿಲುಕೋಸು, ಕ್ಯಾರೆಟ್, ಬೀಟ್ರೂಟ್, ಮೂಲಂಗಿ, ಹೀರೆಕಾಯಿ,
ಆಲೂಗಡ್ಡೆ, ಪಡವಲ ಕಾಯಿ ದರಗಳು ಪ್ರತಿ ಕೆಜಿ 20-30 ರ ಆಸುಪಾಸಿ ನಲ್ಲಿದ್ದವು. ಈಗ ಅವುಗಳ ದರಗಳು ಈಗ 10ರಿಂದ 20ಕ್ಕೆ ಇಳಿಕೆಯಾಗಿದೆ.
ಎಲೆಕೋಸು 1 ಕ್ಕೆ 10, ಹೂಕೋಸು ೧ಕ್ಕೆ 20ಕ್ಕೆ ಮಾರಾಟವಾಗುತ್ತಿವೆ. ಆದರೆ, ಬಟಾಣೆ, ಡಬಲ್ ಬೀನ್ಸ್ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರ ಗಡಿ ದಾಡಿವೆ. ಇಪ್ಪತ್ತು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಗೆ 7-8ಕ್ಕೆ ಖರೀದಿಯಾಗುತ್ತಿದ್ದ ಟೊಮೊಟೋ ಕೆ.ಜಿ.ಗೆ 10 ಕ್ಕೆ ಮಾರಾಟಗೊಳ್ಳುತ್ತಿದೆ.
ಕೆ.ಆರ್.ಮಾರುಕಟ್ಟೆಗೆ ರಾಜ್ಯದ ವಿವಿಧೆಡೆಯಿಂದ ನಿಗದಿತ ಪ್ರಮಾಣದಲ್ಲಿ ತರಕಾರಿ ಸರಬರಾಜಾಗುತ್ತಿದೆ. ಇಳುವರಿ ಉತ್ತಮವಾಗಿದ್ದು, ದರಗಳು ಇಳಿಕೆಯಾ ಗಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವು ಪ್ರದೇಶಕ್ಕೂ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ತರಕಾರಿಗಳು ಪೂರೈಕೆ ಆಗುತ್ತವೆ. ನಿರೀಕ್ಷೆಗೂ ಮೀರಿ ಮಳೆ ಸುರಿದರೆ ಸೊಪ್ಪು, ತರಕಾರಿ ಬೆಳೆ ನೆಲಕಚ್ಚುವ ಸಂಭವವಿದೆ. ಅಲ್ಲದೆ ಮಳೆಯಿಂದ ಹುಳು ಭಾದೆ, ವಿವಿಧ ರೋಗಗಳಿಗೂ ಬೆಳೆ ತುತ್ತಾಗಲಿದೆ.
ಇದರಿಂದ ಪುನಃ ಬೆಲೆ ಏರಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು. ಈರುಳ್ಳಿ ಇಳುವರಿ ಉತ್ತಮ: ಕೆಲವು ದಿನಗಳ ಹಿಂದೆ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಈರುಳ್ಳಿ 100ಗೆ 6 ಕೆ.ಜಿ. ಮಾರಾಟವಾಗುತ್ತಿದೆ. ಮಹಾರಾಷ್ಟ್ರ ಹಾಗೂ ಆಂಧ್ರ ದಲ್ಲಿ ಈರುಳ್ಳಿ ಕೆ.ಜಿ.ಗೆ 10ರಿಂದ 15 ಒಳಗೆ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಕಡಿಮೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.