
ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆಗೆ ಹೋಗಿದ್ದ ದತ್ತು ಪುತ್ರಿ ನಮಿತಾ, ಅಳಿಯ ರಂಜನ್ ಸೇರಿದಂತೆ ಹತ್ತಾರು ಬಿಜೆಪಿ ನಾಯಕರು ನದಿ ತೀರದಿಂದ ವಾಪಸ್ ಬಂದು ನೋಡಿದರೆ ಎಲ್ಲರ ಚಪ್ಪಲಿ ಕಳುವಾಗಿದ್ದವು. ಹರ್ ಕಿ ಪೌಡಿಯಲ್ಲಿ ಚಿತಾ ಭಸ್ಮ ವಿಸರ್ಜನೆಗೆ ಬಂದಿದ್ದ ಅಟಲ್ರ ಕುಟುಂಬದ ಜೊತೆಗೆ ಉತ್ತರಾಖಂಡದ ಮುಖ್ಯಮಂತ್ರಿಗಳ ಪಾದರಕ್ಷೆಗಳನ್ನೂ ಕಳ್ಳ ಮಹಾಶಯ ತೆಗೆದುಕೊಂಡು ಹೋಗಿದ್ದ.
ಮೀನಾಕ್ಷಿ ಔಟ್ ಗಂಭೀರ್ ಇನ್
ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡುವಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಮೋದಿ ಸಾಹೇಬರನ್ನು ಕೇಳಿಕೊಂಡಿದ್ದು, ಅಮಿತ್ ಶಾಗೂ ಕೂಡ ಗೌತಮ್ ಗಂಭೀರ್ಗೆ ಟಿಕೆಟ್ ಕೊಡುವ ಬಗ್ಗೆ ಪಾಸಿಟಿವ್ ಆಗಿದ್ದಾರೆ. ಇದು ಗೊತ್ತಾದ ನಂತರ ಹಾಲಿ ಸಂಸದೆ ಮೀನಾಕ್ಷಿ ಲೇಖಿ ಫುಲ್ ಸಕ್ರಿಯರಾಗಿದ್ದಾರೆ. 4 ವರ್ಷ ಫೋನ್ ಮೇಲೆ ಫೋನ್ ಮಾಡಿದರೂ ಕ್ಯಾರೇ ಅನ್ನದ ಮೀನಾಕ್ಷಿ ಲೇಖಿ ಈಗ ಒಮ್ಮೆಲೇ ಎಲ್ಲರ ಫೋನ್ ಎತ್ತಲಾರಂಭಿಸಿದ್ದು, ಎಲ್ಲೇ ಕಾರ್ಯಕ್ರಮಕ್ಕೆ ಕರೆದರೂ ಹತ್ತು ನಿಮಿಷ ಮುಂಚಿತವಾಗಿ ಹಾಜರಿರುತ್ತಾರೆ.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.