ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ತೆಗೆದ ಪತ್ರಕರ್ತ ಬಂಧನ!

Published : Sep 10, 2019, 08:19 AM IST
ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ತೆಗೆದ ಪತ್ರಕರ್ತ ಬಂಧನ!

ಸಾರಾಂಶ

ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ತೆಗೆದ ಪತ್ರಕರ್ತ ಬಂಧನ| ರಾಷ್ಟ್ರೀಯ ದಿನ ಪತ್ರಿಕೆಯ ಸ್ಥಳೀಯ ಪ್ರತಿನಿಧಿ ಸಂತೋಷ್‌ ಜೈಸ್ವಾಲ್‌ ಬಂಧನ

ಅಜಂಗಢ[ಸೆ.10]: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಚಪಾತಿಯೊಂದಿಗೆ ಸಾಂಬಾರಿನ ಬದಲಿಗೆ ಉಪ್ಪು ನೀಡಲಾಗುತ್ತದೆ ಎಂದು ಆರೋಪಿಸಿದ್ದ ಪತ್ರಕರ್ತರೊಬ್ಬರ ಮೇಲೆ ದೂರು ದಾಖಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಈಗ ಶಾಲೆಯಲ್ಲಿ ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ಸೆರೆಹಿಡಿದ ಮತ್ತೊಬ್ಬ ಪತ್ರಕರ್ತನನ್ನು ಬಂಧಿಸಿದೆ. ರಾಷ್ಟ್ರೀಯ ದಿನ ಪತ್ರಿಕೆಯ ಸ್ಥಳೀಯ ಪ್ರತಿನಿಧಿ ಸಂತೋಷ್‌ ಜೈಸ್ವಾಲ್‌ ಎಂಬವನನ್ನು ಅಜಂಗಢ ಪೊಲೀಸರು ಬಂಧಿಸಿದ್ದು. ಸುಲಿಗೆ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಾಗಿದೆ.

ಕಳೆದ ಶುಕ್ರವಾರ ಶಾಲೆಯಲ್ಲಿ ಮಕ್ಕಳು ನೆಲ ಒರೆಸುವ ಚಿತ್ರ ಸೆರೆಹಿಡಿದು, ಶಾಲೆಯಲ್ಲಿ ಮಕ್ಕಳನ್ನು ಅನಧಿಕೃತ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಜೈಸ್ವಾಲ್‌ ಆರೋಪಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಜೈಸ್ವಾಲ್‌ ಹಾಗೂ ಪ್ರಾಂಶುಪಾಲ ರಾಧೆ ಶ್ಯಾಂ ಯಾದವ್‌ರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು.

ಬಿಸಿಯೂಟಕ್ಕೆ ರೊಟ್ಟಿ ಜೊತೆ ಉಪ್ಪು; ವರದಿ ಮಾಡಿದವನ ಮೇಲೆ ಕೇಸು

ಈ ವೇಳೆ ಪ್ರಾಂಶುಪಾಲ ಜೈಸ್ವಾಲ್‌ ವಿರುದ್ಧ ದೂರು ದಾಖಲಿಸಿದ್ದು, ಆಗಾಗ್ಗೆ ಶಾಲೆಗೆ ಬಂದು ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದ. ಪತ್ರಿಕೆಗೆ ಚಂದಾದಾರರಾಗುವಂತೆ ಒತ್ತಾಯ ಮಾಡುತ್ತಿದ್ದ. ಕೆಲ ವಿದ್ಯಾರ್ಥಿಗಳೊಂದಿಗೆ ನೆಲ ಒರೆಸುವಂತೆ ಹೇಳಿ ಚಿತ್ರೀಕರಣ ಮಾಡಿದ್ದ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿ ಜೈಸ್ವಾಲ್‌ನನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಷಡ್ಯಂತ್ರ: ಬಯಲಾಯ್ತು 'ಬುರುಡೆ' ಗ್ಯಾಂಗ್ ರಹಸ್ಯ!
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌