
ಲಖನೌ (ಆ. 20): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಾವುದೇ ದಾರಿ ಸಿಗದಿದ್ದಲ್ಲಿ, ಸಂಸತ್ತಿನಲ್ಲಿ (ಉಭಯ ಸದನಗಳಲ್ಲಿ) ಬಿಜೆಪಿಗೆ ಬಹುಮತ ಬಂದಾಗ ಮಸೂದೆ ಮಂಡಿಸಿಯಾದರೂ ಮಂದಿರ ನಿರ್ಮಿಸಲಾಗುವುದು ಎಂದು
ಉತ್ತರಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಸದ್ಯ ಸಂಸತ್ತಿನ ಉಭಯ ಸದನಗಳಲ್ಲಿ ನಮಗೆ ಬಹುಮತ ಇಲ್ಲ. ಇಂಥ ವೇಳೆ ಮಸೂದೆ ತಂದರೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ನಮಗೆ ಸೋಲು ಖಚಿತ. ಇದು ಪ್ರತಿಯೊಬ್ಬ ರಾಮಭಕ್ತರಿಗೂ ಗೊತ್ತು. ಹೀಗಾಗಿ ನಮಗೆ ಅಗತ್ಯ ಬಲ ಸಿಕ್ಕಾಗ ಆ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.