ಸ್ಟೀಲ್ ಫ್ಲೈ ಓವರ್ ಸಭೆಯಲ್ಲಿ ‘ಪರಿಹಾರ’ದ ಗಲಾಟೆ

Published : Oct 25, 2016, 07:42 AM ISTUpdated : Apr 11, 2018, 01:00 PM IST
ಸ್ಟೀಲ್ ಫ್ಲೈ ಓವರ್ ಸಭೆಯಲ್ಲಿ ‘ಪರಿಹಾರ’ದ ಗಲಾಟೆ

ಸಾರಾಂಶ

ಉಕ್ಕಿನ ಮೇಲ್ಸೇತುವೆ ಕುರಿತ ಸಭೆಯನ್ನ ಬಹಿಷ್ಕರಿಸಿ ಶಾಸಕ ಗೋಪಾಲಯ್ಯ ಹೊರ ನಡೆದಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಗೋಪಾಲಯ್ಯ, ಕಂಠೀರವ ಸ್ಟುಡಿಯೋ ಬಳಿ ಅಂಡರ್ಪಾಸ್'ಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಬಿಡಿಎ, 3 ವರ್ಷವಾದರೂ ಭೂಮಿ ನೀಡಿದ್ದ ಮಂಗಳಮ್ಮ ಎಂಬುವರಿಗೆ ಪರಿಹಾರ ನೀಡಿರಲಿಲ್ಲ. ಇದರಿಂದ ತೀವ್ರ ಮನನೊಂದು ಮಂಗಳಮ್ಮ ನಿನ್ನೆ ಬಿಡಿಎ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಮಂಗಳಮ್ಮ ಮೃತಪಟ್ಟರೆ ರಾಜ್ ಕುಮಾರ್ ಕತ್ರಿಯೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೋಪಾಲಯ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು.. ಆದ್ರೆ ಅಸಮಾಧಾನಗೊಳ್ಳದ ಗೋಪಾಲಯ್ಯ ಕೂಡಲೇ ಪರಿಹಾರ ನೀಡದಿದ್ದರೆ ಉಪವಾಸ ಕೂರುವ ಬೆದರಿಕೆ ಹಾಕಿದ್ದರು.

ಬೆಂಗಳೂರು(ಅ.25): ಉಕ್ಕಿನ ಮೇಲ್ಸೇತುವೆ ಕುರಿತ ಸಭೆಯನ್ನ ಬಹಿಷ್ಕರಿಸಿ ಶಾಸಕ ಗೋಪಾಲಯ್ಯ ಹೊರ ನಡೆದಿದ್ದಾರೆ. ಸಭೆ ಆರಂಭವಾಗುತ್ತಿದ್ದಂತೆ ಗೋಪಾಲಯ್ಯ, ಕಂಠೀರವ ಸ್ಟುಡಿಯೋ ಬಳಿ ಅಂಡರ್ಪಾಸ್'ಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದ ಬಿಡಿಎ, 3 ವರ್ಷವಾದರೂ ಭೂಮಿ ನೀಡಿದ್ದ ಮಂಗಳಮ್ಮ ಎಂಬುವರಿಗೆ ಪರಿಹಾರ ನೀಡಿರಲಿಲ್ಲ.

ಇದರಿಂದ ತೀವ್ರ ಮನನೊಂದು ಮಂಗಳಮ್ಮ ನಿನ್ನೆ ಬಿಡಿಎ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ಮಂಗಳಮ್ಮ ಮೃತಪಟ್ಟರೆ ರಾಜ್ ಕುಮಾರ್ ಕತ್ರಿಯೇ ಕಾರಣ ಎಂದು ಆರೋಪಿಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೋಪಾಲಯ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು.. ಆದ್ರೆ ಅಸಮಾಧಾನಗೊಳ್ಳದ ಗೋಪಾಲಯ್ಯ ಕೂಡಲೇ ಪರಿಹಾರ ನೀಡದಿದ್ದರೆ ಉಪವಾಸ ಕೂರುವ ಬೆದರಿಕೆ ಹಾಕಿದ್ದರು.

ಈ ವೇಳೆ ಮಧ್ಯ ಪ್ರವೇಶಿಸಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪರಿಹಾರ ಕೊಡಿಸುವ ಭರವಸೆ ನೀಡಿದ್ರು. ಜಾರ್ಜ್ ಭರವಸೆ ನೀಡಿದರೂ ಗೋಪಾಲಯ್ಯ ಸಮಾಧಾನಗೊಳ್ಳದೆ ಇದು ಪರಿಹಾರದ ಪ್ರಶ್ನೆ ಅಲ್ಲ, ಗೌರವದ ಪ್ರಶ್ನೆ ಎಂದು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಏಕಕಾಲದಲ್ಲಿ ಸ್ಥಳೀಯ ಸಂಸ್ಥೆ ಎಲೆಕ್ಷನ್‌ ಬಗ್ಗೆ ಚಿಂತನೆ : ಡಿ.ಕೆ.ಶಿವಕುಮಾರ್‌