ದಿನಾ ಲಡ್ಡು ತಿನ್ನಿಸುತ್ತಿದ್ದ ಪತ್ನಿ: ಬೇಸತ್ತ ಪತಿಯಿಂದ ಡೈವೋರ್ಸ್‌ಗೆ ಅರ್ಜಿ!

Published : Aug 21, 2019, 08:31 AM ISTUpdated : Aug 21, 2019, 09:49 AM IST
ದಿನಾ ಲಡ್ಡು ತಿನ್ನಿಸುತ್ತಿದ್ದ ಪತ್ನಿ: ಬೇಸತ್ತ ಪತಿಯಿಂದ ಡೈವೋರ್ಸ್‌ಗೆ ಅರ್ಜಿ!

ಸಾರಾಂಶ

ಮಂತ್ರವಾದಿ ಮಾತು ಕೇಳಿ ದಿನಾ ಲಡ್ಡು ಉಣಿಸುತ್ತಿದ್ದಕ್ಕೆ ಪತಿ ಡೈವೋ​ರ್‍ಸ್ರ್‍ಗೆ ಅರ್ಜಿ| ನಿತ್ಯ ಬೆಳಗ್ಗೆ 4, ರಾತ್ರಿ 4 ಲಡ್ಡು ಕಡ್ಡಾಯ!| ಮಾಂತ್ರಿಕನ ಮಾತಿನಿಂದ ಪೀಕಲಾಟಕ್ಕೆ ಸಿಕ್ಕ ಪತಿ| ಎಷ್ಟೇ ಹೇಳಿದರೂ ನಂಬಿಕೆ ಬದಲಿಸದ ಪತ್ನಿ

ಮೇರಠ್‌[ಆ.21]: ಮಂತ್ರವಾದಿಯ ಮಾತು ನಂಬಿ, ದಿನವೂ ತನಗೆ ಲಾಡುಉಂಡೆ ತಿನ್ನಿಸುತ್ತಿದ್ದ ಪತ್ನಿಯ ವರ್ತನೆಯಿಂದ ಬೇಸತ್ತ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ಮೇರಠ್‌ನಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಪತಿ ಕಾಯಿಲೆ ಬಿದ್ದ ಕಾರಣ ಪತ್ನಿ ಮಾಂತ್ರಿಕನ ಬಳಿ ತೆರಳಿ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. ಇದಕ್ಕೆ ಮಾಂತ್ರಿಕ ದಿನವೂ ನಿನ್ನ ಗಂಡನಿಗೆ ಬೆಳಗ್ಗೆ ನಾಲ್ಕು, ರಾತ್ರಿ ನಾಲ್ಕು ಲಡ್ಡುಗಳನ್ನು ಮಾತ್ರ ತಿನ್ನಿಸು ಎಂದು ಸಲಹೆ ನೀಡಿದ್ದಾನೆ. ಇದರಂತೆ ಪತ್ನಿ ದಿನವೂ ಲಡ್ಡುಗಳನ್ನು ಮಾತ್ರ ತಿನ್ನಲು ಕೊಡುತ್ತಾಳೆ. ಇದರ ಮಧ್ಯೆ ಬೇರೇನೂ ತಿನ್ನುವಂತಿಲ್ಲ ಗೋಗರೆದಿದ್ದಾನೆ. ಅಲ್ಲದೇ ಇದರಿಂದ ಬೇಸತ್ತು ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ ಪತಿರಾಯ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಕುಟುಂಬ ಸಮಾಲೋಚನಾ ಅಧಿಕಾರಿಗಳು ದಂಪತಿಯನ್ನು ಕರೆದು ಸಮಾಲೋಚನೆ ನಡೆಸಿದ್ದಾರೆ. ಆದರೆ, ಲಡ್ಡುಗಳನ್ನು ತಿಂದರೆ ಮಾತ್ರ ಗಂಡನ ಕಾಯಿಲೆ ನಿವಾರಣೆಯಾಗುತ್ತದೆ ಎಂದು ಆ ಮಹಿಳೆ ಬಲವಾಗಿ ನಂಬಿದ್ದಾಳೆ. ಆಕೆಗೆ ಎಷ್ಟೇ ತಿಳಿದರೂ ಕೇಳುತ್ತಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದ್ದಾರೆ. ಈ ದಂಪತಿಗೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!