
ನೊಯ್ಡಾ(ಫೆ.03): ಇದನ್ನು ದೇಶದಅತೀ ದೊಡ್ಡ ಆನ್'ಲೈನ್ ವಂಚನೆ ಎನ್ನ ಬಹುದು. ಉತ್ತರಪ್ರದೇಶದ ನೊಯ್ಡಾದಲ್ಲಿ ಆನ್ ಲೈನ್ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ 3700 ಕೋಟಿ ವಂಚನೆ ನಡೆದಿದ್ದು, ಈ ಬೃಹತ್ ಜಾಲವನ್ನು ಲಖನೌ ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅನುಭವ್ ಮಿಟ್ಟಲ್, ಶ್ರೀಧರ್ ಪ್ರಸಾದ್ ಮತ್ತು ಮಹೇಶ್ ದಯಾಳ್ ಎಂಬುವವರು ನೊಯ್ಡಾದ ಸೆಕ್ಟರ್-63ಯಲ್ಲಿ ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ ಇದರ ಮೂಲಕ ಆನ್ಲೈನ್ನಲ್ಲಿ ಸುಮಾರು 7 ಲಕ್ಷ ಜನರಿಗೆ 3700 ಕೋಟಿ ವಂಚನೆ ಮಾಡಿದ್ದಾರೆ. ಅಂತೆಯೇ ಸುಮಾರು 3700 ಕೋಟಿ ರೂ. ವಂಚನೆ ಕುರಿತು ದಾಖಲೆ ಸಂಗ್ರಹಿಸಿದ್ದು, ಈ ಪೈಕಿ 500 ಕೋಟಿ ರು.ಮೌಲ್ಯದ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.