
ಲಖನೌ: ರಾಜ್ಯದ ಎಲ್ಲಾ ಜೈಲುಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ಉತ್ತರಪ್ರದೇಶದ ಬಂಧೀಖಾನೆ ಇಲಾಖೆ ಚಿಂತನೆ ನಡೆಸಿದೆ.
ಜೈಲುಗಳಲ್ಲಿ ಸಾಕಷ್ಟು ಜಾಗದ ಲಭ್ಯತೆ ಇರುತ್ತದೆ, ರಕ್ಷಣೆಯೂ ಇರುತ್ತದೆ. ಹೀಗಾಗಿ ಸರ್ಕಾರೇತರ ಸಂಸ್ಥೆ ಗಳು ಮತ್ತು ಸಂಘ- ಸಂಸ್ಥೆಗಳ ನೆರವಿನಿಂದ ಗೋಶಾಲೆ ಆರಂಭಿಸಲು ಚಿಂತಿಸಲಾಗಿದೆ.
ಜೊತೆಗೆ ಕೈದಿಗಳ ಸೇವೆ ಬಳಸಿಕೊಳ್ಳಲಾಗುವುದು. ಗೋವುಗಳಿಂದ ಲಭ್ಯವಾಗುವ ಹಾಲನ್ನು ಜೈಲಿನಲ್ಲೇ ಬಳಸಿಕೊಳ್ಳಲಾಗುವುದು. ಜೊತೆಗೆ ಗೋವುಗಳಿಂದ ಲಭ್ಯವಾಗುವ ಗೊಬ್ಬರ ಬಳಸಿ ಜೈಲಿನ ಆವರಣದಲ್ಲಿಯೇ ಸಾವಯವ ಕೃಷಿ ನಡೆಸುವ ಆಲೋಚನೆ ಇದೆ ಎಂದು ಸರ್ಕಾರ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.