
ನವದೆಹಲಿ (ಫೆ.20): ಬಿಎಸ್ಪಿಗೆ 'ಬೆಹನ್ಜಿ ಸಂಪತ್ತಿ ಪಕ್ಷ' ಎಂದು ಲೇವಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಯಾವತಿ ಅದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ನರೇಂದ್ರ ದಾಮೋದರ್ ದಾಸ್ ಮೋದಿಯಲ್ಲ ‘ನೆಗೆಟಿವ್ ದಲಿತ್ ಮ್ಯಾನ್’ ಎಂದು ಹೊಸ ವ್ಯಾಖ್ಯಾನ ನೀಡಿದ್ದಾರೆ.
ಬಿಎಸ್ಪಿಯಲ್ಲಿ ಚಳುವಳಿ ಮೊದಲು ಆ ನಂತರ ಪಕ್ಷ ಎನ್ನುವುದು ಪ್ರಧಾನ ಮಂತ್ರಿಗೆ ತಿಳಿದಿಲ್ಲ. ನನ್ನ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಅಲ್ಪಸಂಖ್ಯಾತ ಮುಸ್ಲೀಂಮರ ಏಳಿಗೆಗಾಗಿ ಹೆಚ್ಚಿನ ಸಮಯ ಶ್ರಮಿಸಿದ್ದೇನೆ. ಮೋದಿಯವರು ಬಿಎಸ್ಪಿಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ದಲಿತರು,
ಶೋಷಿತರು, ಬಡವರಿಗಾಗಿ ನನ್ನ ಜೀವನವನ್ನು ಸಮರ್ಪಿಸಿದ್ದೇನೆ. ಅವರು ನನ್ನನ್ನು ‘ಸಂಪತ್ತಿ’ ಎಂದು ಭಾವಿಸಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.