ಬಿಗ್ ಟ್ವಿಸ್ಟ್: ರಫೆಲ್ ತೀರ್ಪಿನಲ್ಲಿ ತಪ್ಪಿದೆ ಎಂದ ಕೇಂದ್ರ!

Published : Dec 15, 2018, 07:04 PM ISTUpdated : Dec 15, 2018, 09:57 PM IST
ಬಿಗ್ ಟ್ವಿಸ್ಟ್: ರಫೆಲ್ ತೀರ್ಪಿನಲ್ಲಿ ತಪ್ಪಿದೆ ಎಂದ ಕೇಂದ್ರ!

ಸಾರಾಂಶ

ರಫೆಲ್ ಒಪ್ಪಂದದ ಸುಪ್ರೀಂ ತೀರ್ಪಿಗೆ ಸಿಕ್ತು ಟ್ವಿಸ್ಟ್| ತೀರ್ಪಿನಲ್ಲಿ ಲೋಪವಿದೆ ಎಂದ ಕೇಂದ್ರ ಸರ್ಕಾರ| ಲೋಪ ಸರಿಪಡಿಸಿಕೊಳ್ಳಲು ಸುಪ್ರೀಂಗೆ ಕೇಂದ್ರದ ಮನವಿ| ಸಿಎಜಿ ವರದಿ ಮತ್ತು ಪಿಎಸಿ ಪರಿಶೀಲನೆ ಉಲ್ಲೇಖದಲ್ಲಿ ಲೋಪ         

ನವದೆಹಲಿ(ಡಿ.15): ರಫೆಲ್ ಒಪ್ಪಂದದ ಕುರಿತು ತನಿಖೆ ನಡೆಸಬೇಕಾದ ಅವಶ್ಯಕತೆ ಇಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ.

ಈ ಮಧ್ಯೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಲೋಪದೋಷವಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಖುದ್ದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯವನ್ನು ಕೇಳಿದೆ.

ಹೌದು, ಸುಪ್ರೀಂ ತೀರ್ಪಿನಲ್ಲಿ ರಫೆಲ್ ಯುದ್ಧ ವಿಮಾನದ ಬೆಲೆ ಕುರಿತಂತೆ ಸಿಎಜಿ ವರದಿ ಮತ್ತು ಆ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಪರಿಶೀಲಿಸಿದ ಕುರಿತು ಉಲ್ಲೇಖವಿದೆ.

ಆದರೆ ಇದುವರೆಗೂ ಸಿಎಜಿ ರಫೆಲ್ ಯುದ್ಧ ವಿಮಾನದ ಬೆಲೆ ಕುರಿತು ವರದಿ ಸಿದ್ಧಪಡಿಸಿಲ್ಲ ಮತ್ತು ಅದನ್ನು ಪಿಎಸಿ ಪರಿಶೀಲನೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಿಎಜಿ ಹಾಗೂ ಪಿಎಸಿ ಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾಗಿದೆ ಎಂಬುದನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಕಾನೂನು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಸದ್ಯ ತೀರ್ಪಿನಲ್ಲಿ ಸಿಎಜಿ ವರದಿ ಕುರಿತು ತಪ್ಪು ಗ್ರಹಿಕೆ ಇದ್ದು, ಇದನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.

ರಫೇಲ್ ಡೀಲ್ ತೀರ್ಪು: ಮೋದಿಗೆ ಜಯ, ರಾಹುಲ್‌ಗೆ ಮುಖಭಂಗ!

ಮೋದಿ ‘ಚೋರ್ ಹೇ’ ಅಂದಿದ್ದ ರಾಹುಲ್: ರಫೆಲ್ ದಾಳ ಫೇಲ್!

ಏನು ನಿಮ್ಮ SOURCE?: ಶಾ ಪ್ರಶ್ನೆಗೆ ರಾಹುಲ್ ಮಾಡ್ತಾರಾ ANSWER?

ಮೋದಿ-ಅಂಬಾನಿ ಕಳ್ಳರೆಂದು ಸಾಬೀತುಪಡಿಸಿಯೇ ಸಿದ್ದ: ರಾಹುಲ್!

ಮೋದಿಗೆ ಚಿದಂಬರಂ ರಫೆಲ್ ಪ್ರಶ್ನೆ: ಸ್ಕ್ವಾಡರ್ನ್ ಬೇಡಿಕೆ ಎಷ್ಟು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ