ವ್ಹೀಲ್’ಚೇರ್’ಗೆ ದುಡ್ಡು ಕೊಡದ್ದಕ್ಕೆ ಮಗುವಿನ ತ್ರಿಚಕ್ರ ಸೈಕಲ್ ಬಳಸುವಂತೆ ಮಾಡಿದರು!

Published : Mar 17, 2017, 10:30 AM ISTUpdated : Apr 11, 2018, 01:12 PM IST
ವ್ಹೀಲ್’ಚೇರ್’ಗೆ ದುಡ್ಡು ಕೊಡದ್ದಕ್ಕೆ ಮಗುವಿನ ತ್ರಿಚಕ್ರ ಸೈಕಲ್ ಬಳಸುವಂತೆ ಮಾಡಿದರು!

ಸಾರಾಂಶ

ನಾವು ಐದಾರು ಬಾರಿ ವ್ಹೀಲ್’ಚೇರ್’ಗಾಗಿ ತಲಾ 100 ರೂ. ಪಾವತಿಸದ್ದೇವೆ. ಆದರೆ ಆ ಮಧ್ಯೆ ಅದು ಕಳೆದು ಹೋಗಿದೆ.  ಹೊಸತು ಖರೀದಿಸಲು ನಮ್ಮಿಂದ ಸಾಧ್ಯವಿರಲಿಲ್ಲ. ಕಳೆದು ಹೋದ ವ್ಹೀಲ್’ಚೇರ್’ಗೆ ರೂ.6000 ಕೊಡುವಂತೆ ಹೇಳುತ್ತಿದ್ದಾರೆ, ಎಂದು ರಾಜು ಪತ್ನಿ ತಿಳಿಸಿದ್ದಾರೆ.

ಹೈದರಾಬಾದ್ (ಮಾ.17): ವ್ಹೀಲ್ ಚೇರ್’ಗಾಗಿ ದುಡ್ಡು ಕೊಡದ ಕಾರಣ ಗಾಯಾಳು ಆತನ ಮಗುವಿನ 3-ಚಕ್ರ ಸೈಕಲನ್ನು ಬಳಸುವಂತೆ ಮಾಡಿದ ಆಘಾತಕಾರಿ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

33 ವರ್ಷ ಪ್ರಾಯದ ರಾಜು ಎಂಬಾತ ಅಪಘಾತವೊಂದರಲ್ಲಿ ತಲೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು 6000 ರೂ. ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹಣ ಕೊಡಲು ಆತನಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸದೇ ಕಾಯುವಂತೆ ಮಾಡಿದ್ದಾರೆ ಎಂದು ಏಎನ್ಐ ವರದಿ ಮಾಡಿದೆ.

ನಾವು ಐದಾರು ಬಾರಿ ವ್ಹೀಲ್’ಚೇರ್’ಗಾಗಿ ತಲಾ 100 ರೂ. ಪಾವತಿಸದ್ದೇವೆ. ಆದರೆ ಆ ಮಧ್ಯೆ ಅದು ಕಳೆದು ಹೋಗಿದೆ.  ಹೊಸತು ಖರೀದಿಸಲು ನಮ್ಮಿಂದ ಸಾಧ್ಯವಿರಲಿಲ್ಲ. ಕಳೆದು ಹೋದ ವ್ಹೀಲ್’ಚೇರ್’ಗೆ ರೂ.6000 ಕೊಡುವಂತೆ ಹೇಳುತ್ತಿದ್ದಾರೆ, ಎಂದು ರಾಜು ಪತ್ನಿ ತಿಳಿಸಿದ್ದಾರೆ.

ಹಣವನ್ನು ಹೊಂದಿಸುವವರೆಗೆ ನಮ್ಮ ಮೊಬೈಲ್ ಫೋನ್’ಗಳನ್ನು ಅವರ ಬಳಿ ಇಡುವಂತೆ ಹೇಳಿದ್ದಾರೆ, ಎಂದು ಆಕೆ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಕ್ಕೆ ದೇವಳ ಆಮಂತ್ರಣ ಪತ್ರಿಕೆ ವಿವಾದ; ಪ್ರೊಟೊಕಾಲ್ ಹೆಸರಲ್ಲಿ ಅನ್ಯಧರ್ಮೀಯರ ಆಹ್ವಾನಕ್ಕೆ ತೀವ್ರ ವಿರೋಧ!
ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ