ಆಧಾರ್ ದುರ್ಬಳಕೆ ತಡೆಗೆ ಹೊಸ ಪ್ಲಾನ್..!

Published : Jan 11, 2018, 07:54 AM ISTUpdated : Apr 11, 2018, 12:47 PM IST
ಆಧಾರ್ ದುರ್ಬಳಕೆ ತಡೆಗೆ ಹೊಸ ಪ್ಲಾನ್..!

ಸಾರಾಂಶ

ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಈ ದೂರು ಪರಿಹರಿಸುವಂಥ ವ್ಯವಸ್ಥೆಯೊಂದನ್ನು ಆಧಾರ್ ಪ್ರಾಧಿಕಾರ ಜಾರಿಗೆ ತಂದಿದೆ.

ನವದೆಹಲಿ (ಜ.11): ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಈ ದೂರು ಪರಿಹರಿಸುವಂಥ ವ್ಯವಸ್ಥೆಯೊಂದನ್ನು ಆಧಾರ್ ಪ್ರಾಧಿಕಾರ ಜಾರಿಗೆ ತಂದಿದೆ. ವರ್ಚುವಲ್ ಐಡಿ ಹೆಸರಿನ ಈ ವ್ಯವಸ್ಥೆಯಡಿ, ಗ್ರಾಹಕನೋರ್ವ ತನ್ನ ನಿರ್ದಿಷ್ಟ ಆಧಾರ್ ಸಂಖ್ಯೆಯನ್ನು ಸೇವಾ ಸಂಸ್ಥೆಗೆ ನೀಡದೆಯೇ, ಆಧಾರ್ ಕಾರ್ಡ್‌ನ ಕೆಲ ಅಗತ್ಯ ಮಾಹಿತಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಆಧಾರನ್ನು ಬಳಸುವ ಎಲ್ಲ ಸಂಸ್ಥೆಗಳು ಜೂನ್ 1 ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ. ಮಾರ್ಚ್ 1ರಿಂದಲೇ ವರ್ಚುವಲ್ ಸಂಖ್ಯೆ ವಿತರಣೆ ಆರಂಭವಾಗಲಿದೆ ಎಂದು ಆಧಾರ್ ಪ್ರಾಧಿಕಾರ ತಿಳಿಸಿದೆ.

ವರ್ಚುವಲ್ ಐಡಿ: ವರ್ಚುವಲ್ ಗುರುತು ಸಂಖ್ಯೆ ವ್ಯವಸ್ಥೆಯು ಆಧಾರ್ ಸಂಖ್ಯೆಯ ಪರ್ಯಾಯವಾಗಿರುತ್ತದೆ. ಇದರ ಅನುಸಾರ ಆಧಾರ್ ಗುರುತು ಚೀಟಿದಾರನಿಗೆ 16 ಅಂಕಿಗಳ ವರ್ಚುವಲ್ ಗುರುತು ಸಂಖ್ಯೆಯನ್ನು ನೀಡಲಾಗುತ್ತದೆ. ಯಾವುದಾದರೂ ಸೇವೆ ಪಡೆಯಲು ಆಧಾರ್ ನಂಬರ್ ನೀಡುವ ಬದಲು ವರ್ಚುವಲ್ ಸಂಖ್ಯೆಯನ್ನು ಆಧಾರ್ ಚೀಟಿದಾರನು ನೀಡಬಹುದು. ಈ ವರ್ಚುವಲ್ ಸಂಖ್ಯೆಯನ್ನು ಆಧರಿಸಿ ಆಧಾರ್ ನಂಬರ್ ಪತ್ತೆ ಮಾಡಲು ಸೇವಾದಾರ ಕಂಪನಿಗೆ ಸಾಧ್ಯವಾಗದು. ಹೀಗಾಗಿ ದುರ್ಬಳಕೆ ಅಸಾಧ್ಯ ಎಂದು ತಿಳಿಸಲಾಗಿದೆ. ಆಧಾರ್ ಪ್ರಾಧಿಕಾರದ ವೆಬ್‌ಸೈಟ್ ಅಥವಾ ಮೊಬೈಲ್‌ನಲ್ಲಿ ಆಧಾರ್ ಆ್ಯಪ್ ಮೂಲಕ ಇಂಥ ಸಂಖ್ಯೆಯನ್ನು ಸೃಷ್ಟಿಸಿಕೊಳ್ಳಬಹುದು.

ಸೀಮಿತ ಕೆವೈಸಿ: ಇನ್ನು ಆಧಾರ್ ಆಧರಿತ ಸೇವೆಯನ್ನು ಒದಗಿಸುವ ಕಂಪನಿಗಳು ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಸೀಮಿತ ಕೆವೈಸಿ (ನೋ ಯುವರ್ ಕಸ್ಟಮರ್) ವ್ಯವಸ್ಥೆ ಜಾರಿಗೆ ಬರಲಿದೆ. ಎಂದರೆ ಒಂದು ನಿರ್ದಿಷ್ಟ ಸೇವೆಯನ್ನು ಪಡೆಯಬೇಕು ಎಂದರೆ ಆ ಸೇವೆಗೆ ಮಾತ್ರ ಪ್ರತ್ಯೇಕ ಕೆವೈಸಿ ವಿವರಗಳನ್ನು ಗ್ರಾಹಕರು ಸಲ್ಲಿಸಬೇಕು. ಆ ಸೇವೆಗೆ ಸೀಮಿತವಾಗಿ ಒಂದು ನಿರ್ದಿಷ್ಟ ಗುರುತು ಸಂಖ್ಯೆಯನ್ನು ಆಧಾರ್ ಪ್ರಾಧಿಕಾರ ನೀಡುತ್ತದೆ. ಇದರಿಂದ ಅನ್ಯ ಉದ್ದೇಶಗಳಿಗೆ ಆಧಾರ್ ನಂಬರನ್ನು ಬಳಸಿಕೊಳ್ಳಲು ಸೇವಾದಾರ ಕಂಪನಿಗೆ ಸಾಧ್ಯವಾಗುವುದಿಲ್ಲ. ಸೇವಾದಾರ ಸಂಸ್ಥೆಗಳು ಟೋಕನ್ ಮೂಲಕ ಗ್ರಾಹಕರನ್ನು ಗುರುತಿಸಬೇಕಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ