
ಉಡುಪಿ: ಶಿರೂರು ಸ್ವಾಮೀಜಿ ದೇಹದಲ್ಲಿ ಯಾವುದೇ ರೀತಿಯ ವಿಷದ ಅಂಶ ಪತ್ತೆಯಾಗಿಲ್ಲ. ಸ್ವಾಮೀಜಿಯ ಸಾವು ಸಹಜ ಎಂದು ಕೆಎಂಸಿ ವೈದ್ಯರ ತಂಡ ವರದಿ ನೀಡಿದೆ.
ಈ ಬಗ್ಗೆ ಅಂತಿಮ ವರದಿಯನ್ನು ಪೊಲೀಸರಿಗೆ ಹಸ್ತಾಂತರ ಮಾಡಿದೆ. ಸ್ವಾಮೀಜಿ ಸಾವು ಯುಡಿಆರ್ ಪ್ರಕರಣವಾದ ಕಾರಣ ಎಸಿಗೆ ವರದಿ ಹಸ್ತಾಂತರ ಮಾಡಲಾಗಿದೆ.
ಶಿರೂರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯೇ ಆಗಿಲ್ಲ. ವಿಷ ಇಲ್ಲವೆಂದು ಎಫ್ ಎಸ್ ಎಲ್ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ವರದಿ ಎಫ್ ಎಸ್ ಎಲ್ ವರದಿ ಎರಡಲ್ಲೂ ಸಹಜ ಸಾವು ಎಂದೇ ಉಲ್ಲೇಖ ಮಾಡಲಾಗಿದೆ.
ಸ್ವಾಮೀಜಿಯ ಸಾವಿಗೆ ಅನ್ನನಾಳದಲ್ಲಿ ಆದ ರಕ್ತಸ್ರಾವ ಹಾಗೂ ಕ್ರೋನಿಕ್ ಲಿವರ್ ಸಿರಾಸಿಸ್ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜುಲೈ 19 ರಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಸ್ವಾಮೀಜಿ ನಿಧನರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.