
ಶ್ರೀನಗರ, (ಮಾ.11): ಜಮ್ಮು ಕಾಶ್ಮೀರದ ಟ್ರಾಲ್ನಲ್ಲಿ ಇಂದು (ಸೋಮವಾರ) ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಮುದಾಸಿರ್ ಅಹ್ಮದ್ ಖಾನ್ ಹಾಗೂ ಖಾಲಿದ್ ಎಂಬ ಇಬ್ಬರು ಜೈಷ್ ಉಗ್ರರು ಸಾವನ್ನಪ್ಪಿದ್ದಾರೆ. ಮುದಾಸಿರ್ ಅಹ್ಮದ್ ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಎನ್ನಲಾಗಿದೆ.
ಗಡಿಯೊಳಗೆ ನುಸುಳಿದ ಮತ್ತೊಂದು ಪಾಕ್ ಡ್ರೋಣ್, ಅಟ್ಟಾಡಿಸಿದ ಭಾರತೀಯ ಸೇನೆ
ಪುಲ್ವಾಮಾದ ಪಿಂಗ್ಲಿಶ್ನಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಈ ವೇಳೆ ಉಗ್ರರು, ಭದ್ರತಾ ಸಿಬ್ಬಂದಿ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾರತೀಯ ಸೇನೆ ಕೊಟ್ಟ
ಏಟಿಗೆ ಇಬ್ಬರು ಉಗ್ರರು ಉಡೀಸ್ ಆಗಿದ್ದಾರೆ.
ಫೆ.14ರಂದು ನಡೆದಿದ್ದ ಪುಲ್ವಾಮಾ ದಾಳಿ ಬಳಿಕ ಗಡಿಯಲ್ಲಿ ಉಗ್ರರನ್ನು ಸೆದೆಬಡೆಯಲು ಭಾರತೀಯ ಸೇನೆ ಪಣತೊಟಟು ನಿಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.