ಸಲಿಂಗಿ ಮದುವೆ: ಪೋಷಕರ ಓಲೈಕೆಗೂ ಮಣಿಯದ ಬೆಂಗಳೂರಿನ ತರುಣಿಯರು

Published : Jul 05, 2017, 05:37 PM ISTUpdated : Apr 11, 2018, 12:44 PM IST
ಸಲಿಂಗಿ ಮದುವೆ: ಪೋಷಕರ ಓಲೈಕೆಗೂ ಮಣಿಯದ ಬೆಂಗಳೂರಿನ ತರುಣಿಯರು

ಸಾರಾಂಶ

ಸಲಿಂಗ ಮದುವೆಯನ್ನು 22 ದೇಶಗಳು ಸಿಂಧುಗೊಳಿಸಿದ್ದು ಭಾರತ ಇನ್ನೂ ಒಪ್ಪಿಕೊಳ್ಳಬೇಕಾಗಿದೆ. ಇದನ್ನು ಸಹಜ ಎನ್ನುವಂತೆ ಒಪ್ಪಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ಹೀಗಿರುವಾಗ ಕೋರಮಂಗಲದಲ್ಲಿ ಸಲಿಂಗ ಮದುವೆ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಜು.05): ಸಲಿಂಗ ಮದುವೆಯನ್ನು 22 ದೇಶಗಳು ಸಿಂಧುಗೊಳಿಸಿದ್ದು ಭಾರತ ಇನ್ನೂ ಒಪ್ಪಿಕೊಳ್ಳಬೇಕಾಗಿದೆ. ಇದನ್ನು ಸಹಜ ಎನ್ನುವಂತೆ ಒಪ್ಪಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ಹೀಗಿರುವಾಗ ಕೋರಮಂಗಲದಲ್ಲಿ ಸಲಿಂಗ ಮದುವೆ ನಡೆದಿದ್ದು ಚರ್ಚೆಗೆ ಕಾರಣವಾಗಿದೆ.

25 ವರ್ಷದ ರಂಜಿತಾ (ಹೆಸರು ಬದಲಾಯಿಸಲಾಗಿದೆ) 21 ವರ್ಷದ ಕವಿತಾ (ಹೆಸರು ಬದಲಾಯಿಸಲಾಗಿದೆ) ಕೋರಮಂಗಲದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಇವರಿಬ್ಬರೂ ದೂರದ ಸಂಬಂಧಿಗಳು ಎಂದು ತಿಳಿದು ಬಂದಿದೆ. ರಂಜಿತಾ ಕಾಲ್ ಸೆಂಟರ್ ಒಂದರ ದ್ಯೋಗಿಯಾಗಿದ್ದು. ಕವಿತಾ ಕಾಲೇಜೊಂದರಲ್ಲಿ ಬಿಕಾಂ ಕಲಿಯುತ್ತಿದ್ದಾರೆ. ಇವರಿಬ್ಬರು ಮದುವೆಯಾದ ವಿಷಯ ತಿಳಿಯುತ್ತಿದ್ದಂತೆ  ಕವಿತಾ ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಈ ಹುಡುಗಿ ಮತ್ತು ಪೋಷಕರನ್ನು ರಾಜಿ ಮಾಡಿಸಲು ಯತ್ನಿಸುತ್ತಿದ್ದಾರೆ.   

ನಾನು ಚಿಕ್ಕಂದಿನಿಂದಲೇ ಕವಿತಾ ಕಡೆ ಆಕರ್ಷಿತಳಾಗಿದ್ದೆ. ಆದರೆ ಕವಿತಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾದ್ದರಿಂದ ಒಪ್ಪಿಸುವುದು ಕಷ್ಟ ಎಂದು ತಿಳಿದಿತ್ತು. ನಿಧಾನವಾಗಿ ಆಕೆಗೆ ಆಧುನಿಕ ಜೀವನಶೈಲಿಯನ್ನು, ಯೋಚನೆಯನ್ನು ಪರಿಚಯಿಸತೊಡಗಿದೆ. ದುಬಾರಿ ಗಿಫ್ಟ್’ಗಳನ್ನು ನೀಡುತ್ತಿದ್ದೆ. ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಮೊದಲು ಕವಿತಾ ಒಪ್ಪಲಿಲ್ಲ. ಆದರೂ ಭರವಸೆ ಕಳೆದುಕೊಳ್ಳದೇ ಅವಳ ಹಿಂದೆ ಬಿದ್ದೆ. ಕೊನೆಗೆ ಮದುವೆಯಾಗಬೇಕೆಂದು ನಿರ್ಧರಿಸಿ ಮನೆ ಬಿಟ್ಟು ಓಡಿ ಹೋಗಲು ಪ್ಲಾನ್ ಮಾಡಿದ್ವಿ ಎಂದು ರಂಜಿತಾ ಹೇಳಿದ್ದಾರೆ.

ಪೋಷಕರು ಎಷ್ಟೇ ಓಲೈಕೆ ಮಾಡಿದರೂ ವಾಪಸ್ ಮನೆಗೆ ಹೋಗಲು ಇಬ್ಬರೂ ಒಲ್ಲೆ ಎಂದಿದ್ದಾರೆ. ಇಬ್ಬರೂ ಒಟ್ಟಿಗೆ ಬಾಳುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಪ್ರಕರಣವನ್ನು ವನಿತಾ ಸಹಾಯವಾಣಿಗೆ ವಹಿಸಲಾಗಿದೆ.

ಭಾರತೀಯ ನೀತಿ ಸಂಹಿತೆ ಸೆಕ್ಷನ್ 377 ರ ಪ್ರಕಾರ ಸಲಿಂಗ ವಿವಾಹ ಕ್ರಿಮಿನಲ್ ಅಪರಾಧ. ಇಂತವರಿಗೆ ಜೀವಾವಧಿ ಶಿಕ್ಷೆ, 10 ವರ್ಷ ಜೈಲುಶಿಕ್ಷೆ ಅಥವಾ ದಂಡ ವಿಧಿಸಬಹುದು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ