
ತುಮಕೂರು(ಮಾ.24): ಮುಸ್ಲಿಂ ಯುವಕನೊಬ್ಬ ಸಿದ್ದಗಂಗಾ ಶ್ರೀಗಳಿಗೆ ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸಿ ಊರಿಗೆಲ್ಲಾ ಪಾನಕ,ಮಜ್ಜಿಗೆ, ಹೆಸರುಬೇಳೆ ಹಂಚಿರುವ ವಿಶೇಷ ಆಚರಣೆ ನಡೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಇರ್ಫಾನ್ ಜೆ.ಕೆ ಎಂಬ ಯುವಕ ಶ್ರೀಗಳಿಗೆ ಪೂಜೆ ಸಲ್ಲಿಸಿದವನು. ಶತಾಯುಶಿ ಸಿದ್ದಗಂಗಾ ಶ್ರೀಗಳು ಬರುವ ಏಪ್ರಿಲ್ 1ಕ್ಕೆ 111 ನೇ ವರ್ಷಕ್ಕೆ ಕಾಲುಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಆ ದಿನದ ಪ್ರಚಾರಕ್ಕೆಂದು ಶ್ರೀಗಳ ಪುತ್ಥಳಿಯಿರುವ ಬೆಳ್ಳಿರಥ ನಿನ್ನೆ ಕೊಡಿಗೇನಹಳ್ಳಿಗೆ ತಲುಪಿದೆ. ಇದನ್ನ ಗಮನಿಸಿದ ಇರ್ಫಾನ್ ಶಾಮಿಯಾನ ಹಾಕಿಸಿ ಸಿದ್ದಗಂಗಾ ಶ್ರೀಗಳಿಗೆ ಪೂಜೆ ಸಲ್ಲಿಸಿ, ಊರಿಗೆಲ್ಲಾ ಪಾನಕ ಮಜ್ಜಿಗೆ ಹಂಚಿದ್ದಾರೆ.
ಯುವಕನ ಈ ನಡೆಗೆ ನೆರೆಹೊರೆಯುವರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.