(ವಿಡಿಯೋ)ವಿಧಾನಸಭೆಯ ಸ್ಪೀಕರ್'ನ ಅಧಿಕಾರದ ದಂಡ ಕಸಿದು ಸದನದಿಂದ ಓಡಿದ ಸಚಿವ: ಕಾರಣವೇನು ಗೊತ್ತಾ?

Published : Dec 20, 2016, 12:42 AM ISTUpdated : Apr 11, 2018, 01:09 PM IST
(ವಿಡಿಯೋ)ವಿಧಾನಸಭೆಯ ಸ್ಪೀಕರ್'ನ ಅಧಿಕಾರದ ದಂಡ ಕಸಿದು ಸದನದಿಂದ ಓಡಿದ ಸಚಿವ: ಕಾರಣವೇನು ಗೊತ್ತಾ?

ಸಾರಾಂಶ

ತ್ರಿಪುರಾದ ಅರಣ್ಯ ಸಚಿವ ನರೇಶ್ ಜಮಾತಿಯಾ ಅವರ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯಲ್ಲಿ  ಅವಕಾಶ ನಿರಾಕರಿಸಿದ್ದಕ್ಕೆ ಕಲಾಪ ನಡೆಯುತ್ತಿದ್ದ ವೇಳೆ ಕುಪಿತರಾದ ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ಸ್ಪೀಕರ್ ರಾಮೇಂದ್ರ ಚಂದ್ರ ದೇಬ್‍ನಾಥ್ ಅವರ ಅಧಿಕಾರ ದಂಡವನ್ನು ಕಸಿದು ಓಡಿದ್ದಾರೆ.

ತ್ರಿಪುರಾ(ಡಿ.20): ಅರಣ್ಯ ಸಚಿವರೊಬ್ಬರು ವಿಧಾನಸಭೆಯ ಸ್ಪೀಕರ್ ಬಳಿ ಇದ್ದ ಅಧಿಕಾರದ ದಂಡ ಕಸಿದು ಸದನದಿಂದ ಹೊರಗೆ ಓಡಿ ಹೋದ ಹಾಸ್ಯಸ್ಪದ ಘಟನೆ ತ್ರಿಪುರಾದಲ್ಲಿ ನಡೆದಿದೆ.

ತ್ರಿಪುರಾದ ಅರಣ್ಯ ಸಚಿವ ನರೇಶ್ ಜಮಾತಿಯಾ ಅವರ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ವಿಧಾನಸಭೆಯಲ್ಲಿ  ಅವಕಾಶ ನಿರಾಕರಿಸಿದ್ದಕ್ಕೆ ಕಲಾಪ ನಡೆಯುತ್ತಿದ್ದ ವೇಳೆ ಕುಪಿತರಾದ ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ಸ್ಪೀಕರ್ ರಾಮೇಂದ್ರ ಚಂದ್ರ ದೇಬ್‍ನಾಥ್ ಅವರ ಅಧಿಕಾರ ದಂಡವನ್ನು ಕಸಿದು ಓಡಿದ್ದಾರೆ.

ನರೇಶ್ ಜಮಾತಿಯಾ ಲೈಂಗಿಕ ಹಗರಣ ಪ್ರಕರಣದ ಬಗ್ಗೆ ಚರ್ಚೆ ನಡೆಸಬೇಕೆಂದು ಬರ್ಮನ್ ಪಟ್ಟು ಹಿಡಿದಿದ್ದರು. ಆದರೆ ಈ ಚರ್ಚೆಗೆ ಸ್ಪೀಕರ್ ದೇಬ್‍ನಾಥ್ ಅನುಮತಿ ನಿರಾಕರಿಸಿದ್ದರು. ಚರ್ಚೆಗೆ ಅನುಮತಿ ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡ ಬರ್ಮನ್ ಸ್ಪೀಕರ್ ಅವರ ಅಧಿಕಾರ ದಂಡ ಕಸಿದು ಸದನದ ಸುತ್ತಲೂ ಓಡಿ, ಕಲಾಪಕ್ಕೆ ಭಂಗ ಮಾಡಿದ್ದಾರೆ.

ಬರ್ಮನ್ ಕೈಯಲ್ಲಿದ್ದ ಅಧಿಕಾರ ದಂಡವನ್ನು ವಾಪಸ್ ಪಡೆಯಲು ಕಾಂಗ್ರೆಸ್ ಮತ್ತು ಟಿಎಂಸಿ ಶಾಸಕರು ಅವರ ಹಿಂದೆಯೇ ಓಡಿದ್ದಾರೆ. ಸದನದಲ್ಲಿ ಕೋಲಾಹಲ ಸೃಷ್ಟಿಯಾದಾಗ ಸ್ಪೀಕರ್ ಕಲಾಪ ಮುಂದೂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?
ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ