ಪಕ್ಷಾಂತರ ಪರ್ವ: ದೀದಿ ಕೋಟೆಯಿಂದ ಮತ್ತೋರ್ವ ಶಾಸಕ ಬಿಜೆಪಿಗೆ ಜಿಗಿತ..!

By Web DeskFirst Published May 29, 2019, 10:32 PM IST
Highlights

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರ ಅಷ್ಟೇ ಟಿಎಂಸಿಯ ಶಾಸಕರು ಸೇರಿದಂತೆ  50ಕ್ಕೂ ಅಧಿಕ ಕಾಪೋರೇಟರ್​ಗಳು ಬಿಜೆಪಿ ಸೇರ್ಪಡೆಯಾಗಿದ್ದರು.ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನವದೆಹಲಿ, [ಮೇ.29]: ತೃಣಮೂಲ ಕಾಂಗ್ರೆಸ್​ನ ಶಾಸಕ ಮನಿರುಲ್​ ಇಸ್ಲಾಂ ಅವರು ಇಂದು [ಬುಧವಾರ] ಬಿಜೆಪಿಗೆ ಸೇರ್ಪಡೆಯಾದರು.

ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೃಣಮೂಲ ಕಾಂಗ್ರೆಸ್​ನ ಶಾಸಕ ಮನಿರುಲ್​ ಇಸ್ಲಾಂ ಹಾಗೂ ಟಿಎಂಸಿಯ ಗಧಾದರ್​ ಹಜ್ರಾ, ಮೊಹಮದ್​ ಆಸಿಫ್​ ಇಕ್ಬಾಲ್​, ನಿಮಯಿ ದಾಸ್​ ಅವರು ಬಿಜೆಪಿ ಸೇರಿದರು.

TMC leaders join BJP in presence of Shri and . https://t.co/5fU3oBqcnQ pic.twitter.com/FuX0Q4v6Gi

— BJP (@BJP4India)

ನಿನ್ನೆ [ಮಂಗಳವಾರ] ಅಷ್ಟೇ  ಟಿಎಂಸಿಯಿಂದ ವಜಾಗೊಂಡಿರುವ ಶಾಸಕ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಪುತ್ರ ಸುಭ್ರಾಂಗ್ಶು ರಾಯ್, ತುಷಾರ್​ಕಾಂತಿ ಭಟ್ಟಾಚಾರ್ಯ, ಸಿಪಿಎಂನ ದೇವೇಂದ್ರನಾಥ ರಾಯ್ ಸೇರಿ ಮೂವರು ಶಾಸಕರು ಹಾಗೂ 50ಕ್ಕೂ ಅಧಿಕ ಕಾಪೋರೇಟರ್​ಗಳು ಬಿಜೆಪಿ ಸೇರ್ಪಡೆಯಾಗಿದ್ದರು.

ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಚುನಾವಣೆ ಪ್ರಚಾರದ ವೇಳೆ ಮೋದಿ ಹೇಳಿಕೆ ನೀಡಿದ್ದರು. ಜತೆಗೆ ಪಶ್ಚಿಮ ಬಂಗಾಳದ 143 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಮುಕುಲ್ ರಾಯ್ ತಿಳಿಸಿದ್ದರು. 

ಮುಕುಲ್​ ರಾಯ್​ ಹೇಳಿಕೆ ನೀಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ವಲಸೆ ಪರ್ವ ಪ್ರಾರಂಭವಾಗಿದ್ದು, ಪಶ್ಚಿಮ ಬಂಗಾಳ ರಾಜ್ಯ ರಾಜಕಾರಣ ಭಾರೀ ಕುತೂಹಲ ಮೂಡಿಸಿದೆ.

click me!