ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರ ಅಷ್ಟೇ ಟಿಎಂಸಿಯ ಶಾಸಕರು ಸೇರಿದಂತೆ 50ಕ್ಕೂ ಅಧಿಕ ಕಾಪೋರೇಟರ್ಗಳು ಬಿಜೆಪಿ ಸೇರ್ಪಡೆಯಾಗಿದ್ದರು.ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನವದೆಹಲಿ, [ಮೇ.29]: ತೃಣಮೂಲ ಕಾಂಗ್ರೆಸ್ನ ಶಾಸಕ ಮನಿರುಲ್ ಇಸ್ಲಾಂ ಅವರು ಇಂದು [ಬುಧವಾರ] ಬಿಜೆಪಿಗೆ ಸೇರ್ಪಡೆಯಾದರು.
ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು
ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೃಣಮೂಲ ಕಾಂಗ್ರೆಸ್ನ ಶಾಸಕ ಮನಿರುಲ್ ಇಸ್ಲಾಂ ಹಾಗೂ ಟಿಎಂಸಿಯ ಗಧಾದರ್ ಹಜ್ರಾ, ಮೊಹಮದ್ ಆಸಿಫ್ ಇಕ್ಬಾಲ್, ನಿಮಯಿ ದಾಸ್ ಅವರು ಬಿಜೆಪಿ ಸೇರಿದರು.
TMC leaders join BJP in presence of Shri and . https://t.co/5fU3oBqcnQ pic.twitter.com/FuX0Q4v6Gi
— BJP (@BJP4India)ನಿನ್ನೆ [ಮಂಗಳವಾರ] ಅಷ್ಟೇ ಟಿಎಂಸಿಯಿಂದ ವಜಾಗೊಂಡಿರುವ ಶಾಸಕ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಪುತ್ರ ಸುಭ್ರಾಂಗ್ಶು ರಾಯ್, ತುಷಾರ್ಕಾಂತಿ ಭಟ್ಟಾಚಾರ್ಯ, ಸಿಪಿಎಂನ ದೇವೇಂದ್ರನಾಥ ರಾಯ್ ಸೇರಿ ಮೂವರು ಶಾಸಕರು ಹಾಗೂ 50ಕ್ಕೂ ಅಧಿಕ ಕಾಪೋರೇಟರ್ಗಳು ಬಿಜೆಪಿ ಸೇರ್ಪಡೆಯಾಗಿದ್ದರು.
ಟಿಎಂಸಿಯ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಚುನಾವಣೆ ಪ್ರಚಾರದ ವೇಳೆ ಮೋದಿ ಹೇಳಿಕೆ ನೀಡಿದ್ದರು. ಜತೆಗೆ ಪಶ್ಚಿಮ ಬಂಗಾಳದ 143 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಮುಕುಲ್ ರಾಯ್ ತಿಳಿಸಿದ್ದರು.
ಮುಕುಲ್ ರಾಯ್ ಹೇಳಿಕೆ ನೀಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ವಲಸೆ ಪರ್ವ ಪ್ರಾರಂಭವಾಗಿದ್ದು, ಪಶ್ಚಿಮ ಬಂಗಾಳ ರಾಜ್ಯ ರಾಜಕಾರಣ ಭಾರೀ ಕುತೂಹಲ ಮೂಡಿಸಿದೆ.