
ಕಲ್ಲಿಕೋಟೆ(ಸೆ.25): ಮುಸ್ಲಿಂಮರನ್ನು ವೋಟ್ ಬ್ಯಾಂಕ್ ಎಂದು ಪರಿಗಣಿಸಬೇಡಿ ಅವರನ್ನು ನಿಮ್ಮ ಸೋದರರಂತೆ ಕಂಡು ಸಬಲೀಕರಣಗೊಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಕೇರಳದ ಕಲ್ಲಿಕೋಟೆಯಲ್ಲಿ ಕೇರಳ ಬಿಜೆಪಿ ಏರ್ಪಡಿಸಿದ್ದ ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ಜನ್ಮಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ಸಮುದಾಯವನ್ನು ನಿಂದಿಸುವುದು, ವೋಟ್ ಬ್ಯಾಂಕ್ ಅಥವಾ ಸರಕುಗಳಂತೆ ನೋಡುವುದನ್ನು ಬಿಟ್ಟು ಅವರನ್ನು ಸಬಲೀಕರಣಗೊಳಿಸಿ ಎಂದು ದೀನ್ ದಯಾಳ್ ಅವರ ವ್ಯಾಖ್ಯಾನವನ್ನು ಸ್ಮರಿಸಿದರು. ಕೇಂದ್ರ ಸರ್ಕಾರದ ಉದ್ದೇಶ ಎಲ್ಲರ ಜೊತೆ ಎಲ್ಲರ ವಿಕಾಸ ಹಾಗೂ ಕೆಳಸ್ತರದಲ್ಲಿರುವವರನ್ನು ಅಭಿವೃದ್ಧಿಗೊಳಿಸಿ ಸಮಾನತೆ ದೊರಕಿಸುವುದಾಗಿದೆ ಎಂದರು.
ಬಿಜೆಪಿಯು ಕೇರಳದಲ್ಲಿ ರಾಜಕೀಯ ಪ್ರಾಬಲ್ಯ ಪಡೆಯಲು ಮೋದಿ ಭೇಟಿ ಹೆಚ್ಚು ಪರಿಣಾಮಕಾರಿಯಾಗಿದೆ. ಅದಲ್ಲದೆ ಕಮ್ಯುನಿಸ್ಟ್ ಪ್ರಾಬಲ್ಯದ ಈ ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.