ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು: 50 ಸಾವು!

Published : Oct 19, 2018, 08:20 PM IST
ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು: 50 ಸಾವು!

ಸಾರಾಂಶ

ದಸರಾ ಹಬ್ಬದ ಸಂಭ್ರಮ ಕಸಿದ ರೈಲು ಅಪಘಾತ! ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು! ಪಂಜಾಬ್ ನ ಅಮೃತಸರ್ ಬಳಿ ನಡೆದ ದುರ್ಘಟನೆ! ಅಪಘಾತದಲ್ಲಿ ಕನಿಷ್ಟ 50 ಜನ ದುರ್ಮರಣ   

ಅಮೃತಸರ್(ಅ.19): ದಸರಾ ಹಬ್ಬದ ನಿಮಿತ್ತ ಇಡೀ ದೇಶ ಸಂಭ್ರಮದಲ್ಲಿ ಮಿಂದೆದ್ದರೆ, ಅಮೃತಸರ್ ದಲ್ಲಿ ನಡೆದ ರೈಲು ದುರಂತವೊಂದು ಈ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ರಾವಣ ದಹನ ಸಮಾರಂಭದ ವೇಳೆ ರೈಲೊಂದು ಜನರ ಮೇಲೆ ಹರಿದ ಪರಿಣಾಮ ಕನಿಷ್ಟ 50 ಜನ ಸಾವನ್ನಪ್ಪಿರುವ ಘಟನೆ ಅಮೃತಸರ್ ಬಳಿ ನಡೆದಿದೆ.

ಹಳಿಯ ಪಕ್ಕದಲ್ಲೇ ರಾವಣ ದಹನ ಸಮಾರಂಭ ನಡೆಯುವ ವೇಳೆ ಜಲಂಧರ್ ಎಕ್ಸಪ್ರೆಸ್ ರೈಲು ನಿಂತಿದ್ದ ಜನರ ಮೇಲೆ ಹರಿದಿದೆ. ಒಂದು ಹಳಿಯ ಮೇಲೆ ರೈಲು ಬಂದ ಪರಿಣಾಮ ನೆರೆದಿದ್ದ ಜನ ಮತ್ತೊಂದು ಹಳಿಯತ್ತ ಓಡಿದ್ದಾರೆ. ಆದರೆ ಇದೇ ವೇಳೆ ಜಲಂಧರ್ ಎಕ್ಸಪ್ರೆಸ್ ರೈಲು ಬಂದ ಪರಿಣಾಮ ರೈಲಿನಡಿ ಸಿಕ್ಕು ಕನಿಷ್ಟ 50 ಜನ ಸಾವನ್ನಪ್ಪಿದ್ದಾರೆ.

ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?