
ಮುಂಬೈ (ಜು. 31): ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ನಂಬರ್ ಪೋಸ್ಟ್ ಮಾಡಿ, ಇದನ್ನು ಬಳಸಿಕೊಂಡು ಹೇಗೆ ಹಾನಿ ಮಾಡುತ್ತೀರಿ ನೋಡೋಣ ಎಂದು ಸವಾಲೊಡ್ಡಿದ್ದರು.
ಸವಾಲನ್ನು ಸ್ವೀಕರಿಸಿದ್ದ ಆಧಾರ್ ವಿರೋಧಿಗಳು ಅದನ್ನು ಬಳಸಿಕೊಂಡು ಶರ್ಮಾರ ಜನ್ಮ ದಿನಾಂಕ, ಪಾನ್ ನಂಬರ್, ವೋಟರ್ ಐಡಿ, ಟೆಲಿಕಾಂ ಆಪರೇಟರ್, ಫೋನ್ ಮಾಡೆಲ್, ಏರ್ ಇಂಡಿಯಾ ಐಡಿ, ವಾಟ್ಸಪ್ನಲ್ಲಿ ಬಳಸಲ್ಪಡುವ ಅವರ ವೈಯಕ್ತಿಕ ಫೋಟೊಗಳನ್ನೂ ಪತ್ತೆ ಹಚ್ಚಿ ಕೆಲವರು ಟ್ವೀಟ್ ಮಾಡಿದ್ದರು. ಇವೆಲ್ಲ ಬೇರೆಡೆಯಿಂದ ಪಡೆದ ಮಾಹಿತಿಗಳು, ಆಧಾರ್ ಬೇಧಿಸಲು ಸಾಧ್ಯವಿಲ್ಲ ಎಂದು ಶರ್ಮಾ ಮತ್ತು ಆಧಾರ್ ಪ್ರಾಧಿಕಾರ ಸಮರ್ಥಿಸಿಕೊಂಡಿತ್ತು.
ಆದರೆ, ಈಗ ವ್ಯಕ್ತಿಯೊಬ್ಬರು ಶರ್ಮಾರ ಆಧಾರ್ ನಂಬರ್ ಬಳಸಿಕೊಂಡು ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಭೀಮ್ ಆ್ಯಪ್ ಮೂಲಕ 1 ರು. ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಶರ್ಮಾರ ಸವಾಲನ್ನು ಬೇಧಿಸಲಾಗಿದೆಯೇ? ಎಂಬ ಸಂದೇಹ ಮೂಡಿದೆ. ‘ಬಳಕೆದಾರರ ಖಾಸಗಿತನ ರಕ್ಷಣೆಗಾಗಿ ಉತ್ತಮ ಸರ್ಕಾರಿ ವ್ಯವಸ್ಥೆಗಳನ್ನು ರೂಪಿಸಲು ಭೀಮ್ ಮೂಲಕ ಶರ್ಮಾರ ಆಧಾರ್ಗೆ ನನ್ನ ದೇಣಿಗೆ ನೀಡಿದ್ದೇನೆ’ ಎಂದು ಅನೀವರ್ ಎಂಬ ವರು 1 ರು. ದೇಣಿಗೆ ನೀಡಿದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.