ಚಿತ್ರದುರ್ಗದಲ್ಲಿ ಕಪ್ಪುಹಣ ಬಿಳಿ ಮಾಡುತ್ತಿದ್ದ ವ್ಯಾಪಾರಿಯ ಬಂಧನ; 11 ಲಕ್ಷ ನಗದು ಹಣ ಜಪ್ತಿ

Published : Dec 12, 2016, 07:33 AM ISTUpdated : Apr 11, 2018, 01:00 PM IST
ಚಿತ್ರದುರ್ಗದಲ್ಲಿ ಕಪ್ಪುಹಣ ಬಿಳಿ ಮಾಡುತ್ತಿದ್ದ ವ್ಯಾಪಾರಿಯ ಬಂಧನ; 11 ಲಕ್ಷ ನಗದು ಹಣ ಜಪ್ತಿ

ಸಾರಾಂಶ

ನಾಗೇಶ್ ಕಮೀಷನ್ ಆಸೆಗೆ ಹಣ ಬದಲಾವಣೆಯ ದಂಧೆಯಲ್ಲಿ ತೊಡಗಿದ್ದ. ಈತನ ಜೊತೆ ಕೈಜೋಡಿಸಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ(ಡಿ. 12): ಕಪ್ಪುಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ತೊಡಗಿದನೆಂದು ಆರೋಪಿಸಲಾದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಎಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ತಂಡವೊಂದು ನಾಗೇಶ್ ಎಂಬ ವ್ಯಾಪಾರಸ್ಥನನ್ನು ಬಂಧಿಸಿದೆ. ತಿಪಟೂರು ಮೂಲದ ನಾಗೇಶ್ ತಮಿಳುನಾಡಿನಿಂದ ಕೋವಾ ತಂದು ಇಲ್ಲಿಯ ಬೇಕರಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಎನ್ನಲಾಗಿದೆ. ಈತನ ಬಳಿ ಇದ್ದ 2000 ಮತ್ತು 100 ರೂ. ಮುಖಬೆಲೆಯ 11 ಲಕ್ಷ 95 ಸಾವಿರ ಮೌಲ್ಯದ ನೋಟುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಗೇಶ್ ಕಮೀಷನ್ ಆಸೆಗೆ ಹಣ ಬದಲಾವಣೆಯ ದಂಧೆಯಲ್ಲಿ ತೊಡಗಿದ್ದ. ಈತನ ಜೊತೆ ಕೈಜೋಡಿಸಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಡಿ.ಕುಮಾರಸ್ವಾಮಿ, ಸುವರ್ಣನ್ಯೂಸ್, ಚಿತ್ರದುರ್ಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ