ಪ್ರಕೃತಿ ಮಡಿಲಿನಲ್ಲಿ ಮಂಜರಾಬಾದ್ ಕೋಟೆ

Published : May 29, 2018, 10:29 PM IST
ಪ್ರಕೃತಿ ಮಡಿಲಿನಲ್ಲಿ ಮಂಜರಾಬಾದ್ ಕೋಟೆ

ಸಾರಾಂಶ

ಸಕಲೇಶಪುರದ ದೋಣಿಗಾಲ್ ಎಂಬ ಊರಿನ ಚಿಕ್ಕ ಗುಡ್ಡದ ಮೇಲೆ ಈ ಕೋಟೆ ಇದೆ. ಇದನ್ನೇರಲು 250 ಮೆಟ್ಟಿಲುಗಳನ್ನೇರಬೇಕು. ಇದರೊಳಗೆ ಅನೇಕ ಸುರಂಗ ಮಾರ್ಗಗಳಿದ್ದವು ಎನ್ನಲಾಗುತ್ತದೆ. ಈ ಕೋಟೆ ನಿರ್ಮಿಸಿದ್ದು ಒಬ್ಬ ಪ್ರೆಂಚ್ ವಾಸ್ತುಶಿಲ್ಪಿ. 1792ರಲ್ಲಿ ಟಿಪ್ಪು ಮಂಜ್ರಾಬಾದ್ ಕೋಟೆಯನ್ನು ನಿರ್ಮಿಸಿದ.

ಬೆಂಗಳೂರು[ಮೇ.29]: ಮಂಜರಾಬಾದ್ ಕೋಟೆ ಸಕಲೇಶಪುರದಲ್ಲಿ ದಟ್ಟ ಕಾನನದಿಂದ ಆವರಿಸಿಕೊಂಡ ಟಿಪ್ಪುವಿನ ಕಾಲದ ಪ್ರಾಚೀನ ಕೋಟೆ ಇದೆ. ಹೆಸರು ಮಂಜ್ರಾಬಾದ್ ಕೋಟೆ ಅಂತ. ಶಿರಾಡಿ ಘಾಟಿ ರಸ್ತೆ ಸಂಚಾರವಿದ್ದಾಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದವರು ಈ ಕೋಟೆಗೆ ಭೇಟಿ ನೀಡಿ ಮುಂದೆ ಹೋಗುತ್ತಿದ್ದರು.
ಸಕಲೇಶಪುರದ ದೋಣಿಗಾಲ್ ಎಂಬ ಊರಿನ ಚಿಕ್ಕ ಗುಡ್ಡದ ಮೇಲೆ ಈ ಕೋಟೆ ಇದೆ. ಇದನ್ನೇರಲು 250 ಮೆಟ್ಟಿಲುಗಳನ್ನೇರಬೇಕು. ಇದರೊಳಗೆ ಅನೇಕ ಸುರಂಗ ಮಾರ್ಗಗಳಿದ್ದವು ಎನ್ನಲಾಗುತ್ತದೆ. ಈ ಕೋಟೆ ನಿರ್ಮಿಸಿದ್ದು ಒಬ್ಬ ಪ್ರೆಂಚ್ ವಾಸ್ತುಶಿಲ್ಪಿ. 1792ರಲ್ಲಿ ಟಿಪ್ಪು ಮಂಜ್ರಾಬಾದ್ ಕೋಟೆಯನ್ನು ನಿರ್ಮಿಸಿದ. ಈಸ್ಟ್ ಇಂಡಿಯಾ ಕಂಪೆನಿ ಆಗ ಟಿಪ್ಪುವಿನೊಂದಿಗೆ ಸಮರಕ್ಕಿಳಿದಿತ್ತು. ಬ್ರಿಟಿಷ್ ವಿರೋಧಿಯಾಗಿದ್ದ ಫ್ರೆಂಚ್ ಇಂಜಿನಿಯರ್‌ಗಳು ಇದನ್ನು ಮಿಲಿಟರಿ ಸ್ಟೈಲ್‌ನಲ್ಲಿ ನಿರ್ಮಿಸಿದರು. ದಟ್ಟ ಮಂಜಿನಲ್ಲಿ ಈ ಕೋಟೆ ಮುಚ್ಚಿಹೋಗುತ್ತಿತ್ತು. ಹಾಗಾಗಿ ಇದನ್ನು ಟಿಪ್ಪು ‘ಮಂಜ್ರಾಬಾದ್’ ಎಂದು ಕರೆದ. ಟಿಪ್ಪು ಸುಲ್ತಾನ್ ಈ ಕೋಟೆಯಲ್ಲಿರುತ್ತಿದ್ದ ಎನ್ನಲಾಗುತ್ತದೆ.
ಎಲ್ಲಿದೆ?
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ಲ್ಲಿ ಬರುತ್ತದೆ. ಸಕಲೇಶಪುರದಿಂದ 10 ಕಿಮೀ ಹಾಗೂ ಹಾಸನದಿಂದ 37 ಕಿಮೀ ದೂರದಲ್ಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌