ಒಳ್ಳೇ ರಸ್ತೆ ಬೇಕಿದ್ರೆ ದುಡ್ಡು ಕೊಡಿ : ಸಚಿವರ ಖಡಕ್ ಹೇಳಿಕೆ

Published : Jul 17, 2019, 08:56 AM IST
ಒಳ್ಳೇ ರಸ್ತೆ ಬೇಕಿದ್ರೆ ದುಡ್ಡು ಕೊಡಿ : ಸಚಿವರ ಖಡಕ್ ಹೇಳಿಕೆ

ಸಾರಾಂಶ

ಉತ್ತಮ ರಸ್ತೆ ಬೇಕಿದ್ದರೆ ಹಣ ನೀಡಿ. ಟೋಲ್ ವ್ಯವಸ್ಥೆ ಎಂದಿಗೂ ಕೂಡ ರದ್ದಾಗಲ್ಲ ಹೀಗೆಂದು ಕೇಂದ್ರ ಸಚಿವರು ಕಡ್ಡಿ ತುಂಡಾದಂತೆ ಹೇಳಿಕೆ ನೀಡಿದ್ದಾರೆ. 

ನವದೆಹಲಿ[ಜು.17] : ‘ಜೀವಮಾನದಲ್ಲಿ ಎಂದಿಗೂ ಟೋಲ್‌ ರದ್ದಾಗುವುದಿಲ್ಲ. ಒಳ್ಳೇ ರಸ್ತೆ ಬೇಕು ಎಂಬುದಾದರೆ, ಸಾರ್ವಜನಿಕರು ಅದಕ್ಕಾಗಿ ಹಣ ನೀಡಲೇಬೇಕು’ ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. 

ಲೋಕಸಭೆಯಲ್ಲಿ ಕೆಲ ಸಂಸದರು ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಪ್ರಮಾಣದ ಟೋಲ್‌ ಸಂಗ್ರಹಿಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಟೋಲ್‌ ಮೂಲಕ ಸಂಗ್ರಹಿಸಿದ ಹಣದಿಂದ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
 
ಟೋಲ್‌ ವ್ಯವಸ್ಥೆ ಎಂದಿಗೂ ರದ್ದಾಗಲ್ಲ. ಅಲ್ಲದೆ, ದೇಶಾದ್ಯಂತ ಕಳೆದ ಐದು ವರ್ಷಗಳಲ್ಲಿ 40 ಸಾವಿರ ಕಿ. ಮೀ ಉದ್ದದ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ
ಮೋದಿ, ಆರ್‌ಸಿ ಮೋಡಿ.. ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ