ಸ್ಪೀಕರ್‌ರಿಂದ 3 ಅತೃಪ್ತರ ವಿಚಾರಣೆ ಇಂದು: ಶಾಸಕರು ಬರ್ತಾರಾ?

By Web DeskFirst Published Jul 17, 2019, 8:44 AM IST
Highlights

ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ| ಸ್ಪೀಕರ್‌ರಿಂದ 3 ಅತೃಪ್ತರ ವಿಚಾರಣೆ ಇಂದು: ಶಾಸಕರು ಬರ್ತಾರಾ?

 ಬೆಂಗಳೂರು[ಜು.17]: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್‌.ರೋಷನ್‌ ಬೇಗ್‌, ಡಾ.ಕೆ.ಸುಧಾಕರ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಅವರ ವಿಚಾರಣೆಯನ್ನು ಬುಧವಾರ ಸಭಾಧ್ಯಕ್ಷ ರಮೇಶ್‌ ಕುಮಾರ್‌ ನಡೆಸಲು ದಿನ ನಿಗದಿಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಮೂವರ ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ರಮೇಶ್‌ ಕುಮಾರ್‌ ತಿಳಿಸಿದ್ದರು. ಆದರೆ, ಇಬ್ಬರು ಮುಂಬೈನಲ್ಲಿ ಅತೃಪ್ತರ ಬಣದೊಂದಿಗೆ ಸೇರಿದ್ದಾರೆ. ಹೀಗಾಗಿ ವಿಚಾರಣೆಗೆ ಬರುವುದು ಅನುಮಾನ ಇದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೋಷನ್‌ ಬೇಗ್‌ ಅವರು ಆಗಮಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಅಲ್ಲದೇ, ಸುಪ್ರೀಂಕೋರ್ಟ್‌ನ ತೀರ್ಪು ಪ್ರಕಟವಾಗುವುದರಿಂದ ವಿಚಾರಣೆ ನಡೆಸುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

click me!