ಇಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ: ಸಮಾವೇಶಕ್ಕೆ ಭಾಗವಹಿಸದಿರಲು ಬಿಜೆಪಿ ಕಾರ್ಯಕರ್ತರ ನಿರ್ಧಾರ

By Internet DeskFirst Published Oct 1, 2016, 3:12 AM IST
Highlights

ಹಾವೇರಿ(ಅ.01): ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿರುವ, ಕೆ.ಎಸ್.ಈಶ್ವರಪ್ಪರವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಇಂದು ಹಾವೇರಿಯಲ್ಲಿ ನಡೆಲಿದೆ. ಸಮಾವೇಶಕ್ಕೆ ಸಕಲ ಸಿದ್ದತೆಗಳು ನಡೆದಿದ್ದು, ಎಲ್ಲರ ಚಿತ್ತ ಸಮಾವೇಶದತ್ತ ನೆಟ್ಟಿದೆ.

ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನದವರೆಗೆ ಈಶ್ವರಪ್ಪನವರು ಬೃಹತ್ ರಾಲಿ ನಡೆಸಲಿದ್ದಾರೆ. ರಾಲಿಯಲ್ಲಿ ವಿವಿಧ ಕಲಾ ತಂಡಗಳು ಸಾವಿರಾರು ಜನರು ಭಾಗವಹಿಸುತ್ತಾರೆ. ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲ ಹಾಕಲಾಗಿದೆ. 300 ಜನರಿಗೆ ಅವಕಾಶವಿರುವ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. 50 ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸದಂತೆ ಕಸರತ್ತು ನಡೆಸಿದ್ದಾರೆ.

Latest Videos

click me!