
ಬೆಂಗಳೂರು(ಮಾ.02): ಉಧ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದ್ದು, ಪುಂಡಾಟ ಮಾಡಿದ ನಲಪಾಡ್'ಗೆ ಮತ್ತೆ ಜೈಲಾ ಇಲ್ಲವೇ ಬೇಲಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಜಾಮೀನು ವಿಚಾರಣೆಯ ವಾದ-ಪ್ರತಿವಾದ ಆಲಿಸಿರುವ 63ನೇ ಸೆಷನ್ಸ್ ಕೋರ್ಟ್'ನ ನ್ಯಾಯಾಧೀಶರು ಇಂದು ಆದೇಶ ಪ್ರಕಟಿಸಲಿದ್ದಾರೆ. ನ್ಯಾಯದೀಶ ಪರಮೇಶ್ವರ ಪ್ರಸನ್ನ ಅವರು ಜಾಮೀನು ಕುರಿತು ತೀರ್ಪು ನೀಡಲಿದ್ದಾರೆ. ಕಳೆದ 10 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಲಪಾಡ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಇದಕ್ಕೂ ಮೊದಲು ಜೈಲಿನಿಂದಲೇ ತಂದೆ ಹ್ಯಾರಿಸ್'ಗೆ ಕರೆ ಮಾಡಿದ್ದ ನಲಪಾಡ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ನಿನ್ನಿಂದ ಆಗುತ್ತೋ ಇಲ್ವೋ ಹೇಳು. ಹೊರಗಡೆ ನಮ್ಮ ಹುಡುಗರು ಇದ್ದಾರೆ, ಅವರ ಮೂಲಕ ನಾನು ಬೇಲ್ ಮಾಡಿಸಿಕೊಳ್ಳುತ್ತೇನೆ ಎಂದು ತಂದೆ ಮೇಲೆ ಅರಚಾಡಿದ್ದಾನೆ ಎನ್ನಲಾಗಿದೆ. ಜೈಲಿನಿಂದ ಫೊನ್ ಮಾಡಿ ಉರ್ದು ಭಾಷೆಯಲ್ಲೇ ತಂದೆ ಹ್ಯಾರಿಸ್ ಮೇಲೆ ಎಗರಾಡಿರುವ ನಲಪಾಡ್, ಕ್ಯಾ ಕರ್ತಾ ತು, ಇತ್ನಾ ದಿನ್, ದೇಖ್ನೆ ಕೋ ನಹೀ ಆಯ ತು(ಇಷ್ಟು ದಿನ ಏನ್ ಮಾಡ್ತಿದ್ದೀಯ ನೀನು..? ಇನ್ನೂ ನನ್ನ ನೋಡೋಕೆ ಬಂದಿಲ್ಲ), ಬಾಹರ್ ಆಯೇ ತೋ, ದಿಕಾ ತೂ(ನಾನು ಹೊರಗೆ ಬಂದ ಮೇಲೆ ನೋಡ್ಕೋತೇನೆ) ಎಂದು ತಂದೆಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.