
ಮೇಷ : ಷಷ್ಠಾಧಿಪತಿ ವ್ಯಯದಲ್ಲಿರುವುದರಿಂದ ಆರೋಗ್ಯ ಸಮಸ್ಯೆ, ಋಣಭಾರ, ಆದರೆ ಗುರುದೃಷ್ಟಿ ಇರುವುದರಿಂದ ಸಮಸ್ಯೆ ಪರಿಹಾರವಾಗಲಿದೆ.
ವೃಷಭ : ಭಾಗ್ಯಸ್ಥಾನದ ಕೇತುವಿನಿಂದ, ಹಾಗೂ ಭಾಗ್ಯಾಧಿಪ ಕುಜಯುತನಾದ್ದರಿಂದ ಭಾಗ್ಯಹಾನಿ, ದುರ್ಗಾರಾಧನೆ ಮಾಡಿ
ಮಿಥುನ : ದ್ವಿತೀಯದ ರಾಹು ಮಾತಿನಲ್ಲಿ ಎಡವಟ್ಟು, ಕುಟುಂಬದಲ್ಲಿ ದೋಷಗಳಾಗುವ ಸಾಧ್ಯತೆ, ನಾಗನ ಆರಾಧನೆ ಮಾಡಿ
ಕಟಕ : ಸಪ್ತಮದ ಕೇತು ದಾಂಪತ್ಯದಲ್ಲಿ ತೊಂದರೆ ತರುತ್ತಾನೆ, ಭಾಗ್ಯದ ಶುಕ್ರನಿಂದ ಸೌಭಾಗ್ಯ ಪ್ರಾಪ್ತಿ
ಸಿಂಹ : ದ್ವಿತೀಯದ ಬುಧ ಅಷ್ಟಮದಲ್ಲಿರುವುದರಿಂದ ಗಂಟಲು ನೋವು, ಬಾಯಿ ಸಂಬಂಧಿ ತೊಂದರೆ ಕಾಡಲಿದೆ, ವೈದ್ಯರನ್ನು ಸಂಪರ್ಕಿಸಿ
ಕನ್ಯಾ : ವಾಹನ ಚಲಿಸುವಾಗ ಎಚ್ಚರವಿರಲಿ, ಅಪಘಾತವಾಗುವ ಸಂಭವ ಇದೆ, ಸುಬ್ರಹ್ಮಣ್ಯ, ಶನಿಯರ ಆರಾಧನೆ ಮಾಡಿ
ತುಲಾ : ಹೊಸ ಕಾರ್ಯಗಳಿಗೆ ಚಾಲನೆ, ಸಹೋದರರಿಂದ ಕಿರಿಕಿರಿ, ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ : ಮನೆಯಲ್ಲಿ ತೊಂದೆ, ಮನಸ್ಸಿಗೆ ಬೇಸರ, ಕಾರ್ಯವಿಘ್ನ, ಸುಬ್ರಹ್ಮಣ್ಯ ದರ್ಶನ ಮಾಡಿ
ಧನಸ್ಸು : ಸುಖಾಧಿಪತಿ ಲಾಭದಲ್ಲಿರುವುದರಿಂದ ಶುಭದಿನ, ಶುಕ್ರನಿಂದಾಗಿ ತಾಯಿಯಿಂದ ಅನುಕೂಲ ಪಡೆಯಲಿದ್ದೀರಿ
ಮಕರ : ರಾಶಿಯಲ್ಲಿರುವ ಕೇತುವಿನಿಂದ ತಲೆಗೆ ಪೆಟ್ಟುಬೀಳುವ ಸಾಧ್ಯತೆ, ವ್ಯಯದಲ್ಲಿರುವ ಕುಜನಿಂದ ಸುಖ ನಾಶ
ಕುಂಭ : ಮಂಗಳಕಾರ್ಯಗಳ ಯೋಜನೆ ಮಾಡಬಹುದು, ರಾಮನವಮಿ ತಯಾರಿ, ಇತ್ಯಾದಿ ಮನೆ ಕೆಲಸಗಳಲ್ಲಿಭಾಗಿ
ಮೀನ : ದಶಮದಲ್ಲಿರುವ ಕುಜ-ಶನಿಯರಿಂದ ಕಾರ್ಯಸ್ಥಾನದಲ್ಲಿ ಕಿರಿಕಿರಿ, ಗುರುಶಾಂತಿ ಮಾಡಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.