ಕಾಂಗ್ರೆಸ್ ಪರವಾಗಿ 2 ಅಸಿಂಧು ಮತ ಚಲಾಯಿಸಿದ್ದು ಜೆಡಿಎಸ್ ಬಂಡಾಯ ಶಾಸಕರು

By Suvarna Web DeskFirst Published Mar 23, 2018, 11:31 PM IST
Highlights

ಇಂಟು ಮಾರ್ಕ್, ರೈಟ್ ಮಾರ್ಕ್ ಹಾಕಿದ್ದರಿಂದ ಮತಗಳು ಅಸಿಂಧುಗೊಂಡಿವೆ. ವ್ಹಿಪ್ ಗೌರವಿಸಿ ಮತ ಹಾಕಿದ್ದೇವೇಂದು  ಶಾಸಕರು ತಿಳಿಸಿದ್ದಾರೆ.

ಬೆಂಗಳೂರು(ಮಾ.23): ಇಂದು ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಚಲಾಯಿಸಿದ ಇಬ್ಬರು ಜೆಡಿಎಸ್ ಮತಗಳು ಅಸಿಂಧುಗೊಂಡಿವೆ.

4 ಮತಗಳು ಅಸಿಂಧುಗೊಂಡಿದ್ದು, ಇದರಲ್ಲಿ ಕೇಂದ್ರ ಚುನಾವಣಾ ಆಯೋಗ ಬಾಬೂರಾವ್ ಚಿಂಚನಸೂರ್, ಕಾಗೋಡು ತಿಮ್ಮಪ್ಪ ಮತಗಳನ್ನು ಅಸಿಂಧುಗೊಳಿಸಿತ್ತು. ಜೆಡಿಎಸ್'ನ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಹೆಚ್.ಸಿ. ಬಾಲಕೃಷ್ಣ ಮತಗಳು ಅಸಿಂಧುಗೊಂಡಿವೆ.

ಇಂಟು ಮಾರ್ಕ್, ರೈಟ್ ಮಾರ್ಕ್ ಹಾಕಿದ್ದರಿಂದ ಮತಗಳು ಅಸಿಂಧುಗೊಂಡಿವೆ. ವ್ಹಿಪ್ ಗೌರವಿಸಿ ಮತ ಹಾಕಿದ್ದೇವೇಂದು  ಶಾಸಕರು ತಿಳಿಸಿದ್ದಾರೆ.

click me!