ಇಂದು ನಟ ದರ್ಶನ್ ಮನೆ ತೆರವು ಸಾಧ್ಯತೆ

Published : Oct 22, 2016, 03:02 AM ISTUpdated : Apr 11, 2018, 12:46 PM IST
ಇಂದು ನಟ ದರ್ಶನ್ ಮನೆ ತೆರವು ಸಾಧ್ಯತೆ

ಸಾರಾಂಶ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ಭುಮಿ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಹೀಗಾಗಿ ತೆರವು ಯಾವಾಗ  ಎಂಬ ಪ್ರಶ್ನೆ ಕೇಳಿ ಬಂದಿದ್ದವು. ಸುವರ್ಣ ನ್ಯೂಸ್ ಕೂಡ ನಿರಂತರ ವರದಿ ಮಾಡುತ್ತಲೇ ಬಂದಿತ್ತು. ಕೊನೆಗೂ ಇದೀಗ ಒತ್ತುವರಿ ತೆರವಿನ ದಿನಾಂಕ ಬಂದೇ ಬಿಟ್ಟಿದೆ. ಜಿಲ್ಲಾಡಳಿತ 29 ಒತ್ತುವರಿದಾರರ ಮನೆಗಳನ್ನು ವಶಕ್ಕೆ ಪಡೆಯಲಿದೆ. ದರ್ಶನ್ ಮನೆ ಕೂಡ ವಶಕ್ಕೆ ಪಡೆಯಲಾಗುತ್ತಿದೆ ಎನ್ನುವುದು ಮೂಲಗಳ ಮಾಹಿತಿ.

ಬೆಂಗಳೂರು(ಅ.22): ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ಭುಮಿ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಹೀಗಾಗಿ ತೆರವು ಯಾವಾಗ  ಎಂಬ ಪ್ರಶ್ನೆ ಕೇಳಿ ಬಂದಿದ್ದವು. ಸುವರ್ಣ ನ್ಯೂಸ್ ಕೂಡ ನಿರಂತರ ವರದಿ ಮಾಡುತ್ತಲೇ ಬಂದಿತ್ತು. ಕೊನೆಗೂ ಇದೀಗ ಒತ್ತುವರಿ ತೆರವಿನ ದಿನಾಂಕ ಬಂದೇ ಬಿಟ್ಟಿದೆ. ಜಿಲ್ಲಾಡಳಿತ 29 ಒತ್ತುವರಿದಾರರ ಮನೆಗಳನ್ನು ವಶಕ್ಕೆ ಪಡೆಯಲಿದೆ. ದರ್ಶನ್ ಮನೆ ಕೂಡ ವಶಕ್ಕೆ ಪಡೆಯಲಾಗುತ್ತಿದೆ ಎನ್ನುವುದು ಮೂಲಗಳ ಮಾಹಿತಿ.

ಕೋರ್ಟ್​ ಮೆಟ್ಟಿಲೇರಿದ 44 ಒತ್ತುವರಿದಾರರು: ನಾಲ್ಕು ವಾರ ರಿಲೀಫ್

ಅಷ್ಟಕ್ಕೂ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿ ಸರ್ಕಾರಿ ಬಿ ಖರಾಬು ಭೂಮಿಗೆ ಸೇರಿದ 7.31 ಎಕರೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ ಒತ್ತುವರಿ ಮಾಡಿಕೊಂಡಿರುವ 69 ಮನೆಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಎಸ್.ಎಸ್.ಆಸ್ಪತ್ರೆ ಮೊದಲು ತಾತ್ಕಾಲಿಕ ತಡೆ ಪಡೆದಿತ್ತು. ಬಳಿಕ ನಿನ್ನೆ  ಐಡಿಯಲ್ ಹೋಮ್ಸ್ ಲೇಔಟ್ ನ 44 ಆಸ್ತಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಇವರ ಆಸ್ತಿಗಳನ್ನು ನಾಲ್ಕು ವಾರ ವಶಕ್ಕೆ ಪಡೆಯದಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ನಿರ್ದೇಶಿಸಿ ಮತ್ತೊಮ್ಮೆ ದಾಖಲೆಗಳ ಪರಿಶೀಲನೆಗೆ ತಾಕೀತು ಮಾಡಿದೆ.

ಹೈಕೋರ್ಟ್​ ಮೊರೆ ಹೋದವರನ್ನು ಬಿಟ್ಟು ಇನ್ನುಳಿದ 29 ಆಸ್ತಿದಾರರ ಮನೆಗಳನ್ನು ಜಿಲ್ಲಾಡಳಿತ ಇಂದು ವಶಕ್ಕೆ ಪಡೆಯಲಿದೆ. ಇದೇ ವೇಳೆ ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಿಲ್ಲ ಎನ್ನಲಾಗ್ತಿದೆ. ಇದು ನಿಜವೇ ಆಗಿದ್ದಲ್ಲಿ ದರ್ಶನ್ ಮನೆಯನ್ನೂ ಇಂದು ಜಿಲ್ಲಾಡಳಿತ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌
ಗ್ಯಾರಂಟಿ ಎಫೆಕ್ಟ್: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಉಗ್ರಪ್ಪ ಆತಂಕ; ಸತ್ಯ ಒಪ್ಪಿಕೊಂಡರಾ ಕಾಂಗ್ರೆಸ್ ಹಿರಿಯ ನಾಯಕ?