20 ವರ್ಷದ ಹುಡ್ಗ, ಪುಲ್ವಾಮಾ-ಬಾಲಾಕೋಟ್ ಕನ್ಫ್ಯೂಸ್: ಸಂಸದೆಗೆ ತರಾಟೆ!

Published : Jul 03, 2019, 03:18 PM IST
20 ವರ್ಷದ ಹುಡ್ಗ, ಪುಲ್ವಾಮಾ-ಬಾಲಾಕೋಟ್ ಕನ್ಫ್ಯೂಸ್: ಸಂಸದೆಗೆ ತರಾಟೆ!

ಸಾರಾಂಶ

ಪುಲ್ವಾಮಾ-ಬಾಲಾಕೋಟ್ ದಾಳಿಗೆ ವ್ಯತ್ಯಾಸ ಗೊತ್ತಿರದ ಸಂಸದೆ| ಪುಲ್ವಾಮಾ ದಾಳಿಕೋರನನ್ನು 20 ವರ್ಷದ ಹುಡುಗ ಎಂದ ಟಿಎಂಸಿ ನಾಯಕಿ| ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ನೆಟ್ಟಿಗರಿಂದ ಮಂಗಳಾರತಿ| ಬಾಲಾಕೋಟ್ ಸೈನಿಕರನ್ನು ಏರ್ ಲಿಫ್ಟ್ ಮಾಡಿಸಬೇಕಿತ್ತು ಎಂದ ಮಹುವಾ ಮೊಯಿತ್ರಾ| ಪುಲ್ವಾಮಾ ದಾಳಿಗೂ ಬಾಲಾಕೋಟ್ ದಾಳಿಗೂ ತಾಳೆ ಹಾಕದಾದ ಸಂಸದೆ| 

ನವದೆಹಲಿ(ಜು.03): ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿಯನ್ನು ಇಡೀ ಜಗತ್ತೇ ಖಂಡಿಸುತ್ತಿದೆ. ಅದರಂತೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯ ಬಾಲಾಕೋಟ್ ವಾಯುದಾಳಿಯನ್ನೂ ಇಡೀ ವಿಶ್ವ ಪ್ರಶಂಸಿಸುತ್ತಿದೆ.

ಆದರೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತ್ರ ಪುಲ್ವಾಮಾ ದಾಳಿಕೋರನನ್ನು 20 ವರ್ಷದ ಬಾಲಕ ಎಂದು ಕರೆದು ಮಂಗಳಾತರಿ ಮಾಡಿಸಿಕೊಂಡಿದ್ದಾರೆ. ಖಾಸಗಿ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಹುವಾ ಮೊಯಿತ್ರಾ ಪುಲ್ವಾಮಾ-ಬಾಲಾಕೋಟ್ ನಡುವೆ ಗೊಂದಲ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.

ಪುಲ್ವಾಮಾ ದಾಳಿಯನ್ನು ಭದ್ರತಾ ವೈಫಲ್ಯ ಎಂದು ಕರೆದಿರುವ ಮಹುವಾ, ದಾಳಿಕೋರನನ್ನು 20 ವರ್ಷದ ಬಾಲಕ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದೇ ವೇಳೆ ಪುಲ್ವಾಮಾ ದಾಳಿ ಎಂದು ಹೇಳುವ ಬದಲು ಬಾಲಾಕೋಟ್ ದಾಳಿ ಎಂದು ಕರೆಯುವ ಮೂಲಕ ಗೊಂದಲ ಮೂಡಿಸಿದ್ದಾರೆ.

ಬಾಲಾಕೋಟ್’ನಲ್ಲಿ ಸರ್ಕಾರ ಏರ್ ಕವರ್ ನೀಡದಿರುವುದು ಸರಿಯಲ್ಲ ಎಂದಿರುವ ಮಹುವಾ, ಸೈನಿಕರನ್ನು ಏರ್ ಲಿಫ್ಟ್ ಮಾಡಿಸಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಹೇಳುವ ಮೂಲಕ ನಗಪಾಟಲಿಗೆ ಗುರಿಯಾಗಿದ್ದಾರೆ.

ಮಹುವಾ ಮೊಯಿತ್ರಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನೆಟ್ಟಿಗರು, ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ ಕುರಿತು ಕಿಂಚಿತ್ತೂ ಮಾಹಿತಿ ಇಲ್ಲದ ಈ ಸಂಸದೆಯಿಂದ ಕೇಂದ್ರ ಸರ್ಕಾರ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ