
ನವದೆಹಲಿ (ಏ.07): ತೃಣಮೂಲ ಕಾಂಗ್ರೆಸ್ ಸಂಸದೆಯೊಬ್ಬರಿಂದ ವಿಮಾನ ಹೊರಡುವುದು 39 ನಿಮಿಷ ತಡವಾಗಿರುವ ಘಟನೆ ನಡೆದಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ದೋಲಾ ಸೇನ್ ಇಂದು ಮಧ್ಯಾಹ್ನ 2.25 ಕ್ಕೆ ದೆಹಲಿಯಿಂದ ಕಲ್ಕತ್ತಾಗೆ ಎಐ 020 ರಲ್ಲಿ ಹೊರಡಬೇಕಿತ್ತು. ಇವರ ಜೊತೆ ಇವರ ತಾಯಿಯೂ ಬರುವವರಿದ್ದರು. ಅವರು ವೀಲ್ ಚೇರ್ ನಲ್ಲಿ ಬರುವುದರಿಂದ ಹೆಚ್ಚುವರಿ ಹಣ ಪಾವತಿಸಿ ಎಕಾನಮಿ ಕ್ಲಾಸ್ ನ ಎಡಸಾಲಿನಲ್ಲಿ ತಮ್ಮ ತಾಯಿಗೆ ಸೀಟ್ ಕಾಯ್ದಿರಿಸಿದ್ದರು. ಇದರ ಪಕ್ಕ ಎಮರ್ಜೆನ್ಸಿ ಎಕ್ಸಿಟ್ ಇದೆ.
ವಿಕಲ ಚೇತನರಿಗೆ ಎಮರ್ಜೆನ್ಸಿ ಎಕ್ಸಿಟ್ ಪಕ್ಕ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಹಾಗಾಗಿ ಏರ್ ಇಂಡಿಯಾ ಸಿಬ್ಬಂದಿಯವರು ದೋಲಾ ಸೇನ್ ತಾಯಿಯವರಿಗೆ ಅಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಲಿಲ್ಲ. ಬ್ಯುಸಿನೆಸ್ ಕ್ಲಾಸ್ ನಲ್ಲಿ ವಿಕಲಚೇತನರಿಗಾಗಿಯೇ ಮೀಸಲಿರುವ ಆಸನದಲ್ಲಿ ಕುಳಿತುಕೊಳ್ಳಲು ಮನವಿ ಮಾಡಿದರು. ಆದರೆ ಇದಕ್ಕೆ ದೋಲಾ ಸೇನ್ ಒಪ್ಪಲಿಲ್ಲ. ನನ್ನ ವಯಸ್ಸಾದ ತಾಯಿಗಾಗಿಯೇ ಹೆಚ್ಚುವರಿ ಹಣ ನೀಡಿ ಈ ಸೀಟನ್ನು ಕಾಯ್ದಿರಿಸಿದ್ದೇನೆ ಎಂದು ತಾಳ್ಮೆ ಕಳೆದುಕೊಂಡು ರೇಗಾಡಿದರು. ಇವರ ವಾದ ಪ್ರತಿವಾದದಲ್ಲಿ 2.25 ಕ್ಕೆ ಹೊರಡಬೇಕಿದ್ದ ವಿಮಾನ 39 ನಿಮಿಷ ತಡವಾಗಿ 3.4 ಕ್ಕೆ ಹೊರಡಬೇಕಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.