ಹಿಂದಿಯಲ್ಲಿ ಮಾತನಾಡುವಂತೆ ಊಬರ್ ಚಾಲಕನ ಮೇಲೆ ಧಮ್ಕಿ

Published : Nov 05, 2017, 06:36 PM ISTUpdated : Apr 11, 2018, 12:56 PM IST
ಹಿಂದಿಯಲ್ಲಿ ಮಾತನಾಡುವಂತೆ ಊಬರ್ ಚಾಲಕನ ಮೇಲೆ ಧಮ್ಕಿ

ಸಾರಾಂಶ

ಕನ್ನಡದಲ್ಲಿ ಮಾತನಾಡಿದ ಊಬರ್ ಕ್ಯಾಬ್ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ದುಷ್ಕರ್ಮಿಗಳು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕ್ಯಾಬ್ ಚಾಲಕ ಜಗದೀಶ್ ಎಂಬುವವರ ಮೇಲೆ ನಿನ್ನೆ ತಡರಾತ್ರಿ ಐಟಿಸಿ ಹೊಟೇಲ್ ಬಳಿ ದುಷ್ಕರ್ಮಿಗಳು  ಹಲ್ಲೆ ನಡೆಸಿದ್ದಾರೆ.  

ಬೆಂಗಳೂರು (ನ.05): ಕನ್ನಡದಲ್ಲಿ ಮಾತನಾಡಿದ ಊಬರ್ ಕ್ಯಾಬ್ ಚಾಲಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ದುಷ್ಕರ್ಮಿಗಳು ಧಮ್ಕಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕ್ಯಾಬ್ ಚಾಲಕ ಜಗದೀಶ್ ಎಂಬುವವರ ಮೇಲೆ ನಿನ್ನೆ ತಡರಾತ್ರಿ ಐಟಿಸಿ ಹೊಟೇಲ್ ಬಳಿ ದುಷ್ಕರ್ಮಿಗಳು  ಹಲ್ಲೆ ನಡೆಸಿದ್ದಾರೆ.  

ಹೆಬ್ಬಾಳದ ಬಳಿ ಜಗದೀಶ್ ಕಸ್ಟಮರ್'ರನ್ನು ಪಿಕ್ ಮಾಡಿದ್ದರು. ಆತ ತಿಳಿಸಿದ ಸ್ಥಳಕ್ಕೆ ಕರೆದುಕೊಂಡು ಹೋದಾಗ, ತಾನು ಬೇರೆ ಸ್ಥಳಕ್ಕೆ ಕೇಳಿದ್ದಾಗಿ ಕಸ್ಟಮರ್ ಜಗದೀಶ್'ರೊಂದಿಗೆ ಮಾತಿಗಿಳಿದಿದ್ದಾರೆ. ಬಳಿಕ ಆತ ಹೇಳಿದ ಸ್ಥಳಕ್ಕೆ ಜಗದೀಶ್ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಬ್'ನಲ್ಲಿದ್ದ ಸಹ ಪ್ರಯಾಣಿಕರು ಜಗದೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಲ್ಲೆ ವೇಳೆ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿ ಹಿಂದಿಯಲ್ಲಿ ಮಾತನಾಡುವಂತೆ ಧಮ್ಕಿ ಹಾಕಿದ್ದಾರೆ. ಜಗದೀಶ್ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದು,  ಪೊಲೀಸರು ಇಬ್ಬರನ್ನು  ವಶಕ್ಕೆ ಪಡೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ
ದ್ವೇಷ ಭಾಷಣ ಶಾಸನ ಕಾಂಗ್ರೆಸ್ ಕ್ರೂರ ಸಂಪ್ರದಾಯದ ಪ್ರತಿಬಿಂಬ: ಪ್ರಲ್ಹಾದ್ ಜೋಶಿ ಕಿಡಿ